ಬೆಂಗಳೂರು: ತಿಂಡಿ–ತಿನಿಸುಗಳನ್ನು ರೆಸ್ಟಾರೆಂಟ್ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕಲಬುರ್ಗಿ, ಹಾವೇರಿ, ಶಿರಸಿ, ಕುಂದಾಪುರ–ಕೋಟೇಶ್ವರಕ್ಕೆ ತನ್ನ ಸೇವೆಯನ್ನು ವಿಸ್ತರಿಸಿದೆ.
‘ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ’ ಎಂದು ಕಂಪನಿಯ ಆಹಾರ ಮಾರುಕಟ್ಟೆ ವಿಭಾಗದ ರಾಷ್ಟ್ರೀಯ ಬ್ಯುಸಿನೆಸ್ ಹೆಡ್ ಸಿದ್ಧಾರ್ಥ ಭಾಕೂ ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.