‘ದೂರಸಂಪರ್ಕ ಉದ್ಯಮವನ್ನು ಲಾಭದಾಯಕ ಆಗಿ ಮಾಡುವುದು ಹೇಗೆ, ಈ ಉದ್ಯಮವನ್ನು ಹೂಡಿಕೆದಾರರಿಗೆ ಆಕರ್ಷಕವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ದೇಶಕ್ಕೆ ಬಂಡವಾಳ ಹರಿದುಬರಬೇಕು ಎಂದಾದರೆ, ವಾಣಿಜ್ಯೋದ್ಯಮ ವಹಿವಾಟುಗಳು ಸುಲಲಿತ ಆಗಬೇಕು’ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ. ರಾಮಚಂದ್ರನ್ ಹೇಳಿದರು.