<p class="title"><strong>ನವದೆಹಲಿ:</strong>ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೂರಸಂಪರ್ಕ ಕಂಪನಿಗಳಿಗೆ ಮುಂದಿನ ಹೆಜ್ಜೆಗಳ ಕುರಿತು ಸ್ಪಷ್ಟತೆ ತಂದುಕೊಟ್ಟಿರುವ ಕಾರಣ, ಈ ವಲಯವನ್ನು ಲಾಭದಾಯಕ ಆಗಿಸಲು ಕೇಂದ್ರ ದೂರಪಸಂಪರ್ಕ ಇಲಾಖೆ ಗಮನ ನೀಡಬೇಕು ಎಂದು ‘ಬ್ರಾಡ್ಬ್ಯಾಂಡ್ ಇಂಡಿಯಾ ಫೋರಂ’ (ಬಿಐಎಫ್) ಹೇಳಿದೆ.</p>.<p class="title">ದೂರಸಂಪರ್ಕ ವಲಯವು ಹೂಡಿಕೆದಾರರಿಗೆ ಆಕರ್ಷಕ ಅನಿಸುವಂತೆ ಮಾಡಬೇಕು, ಈ ವಲಯದಲ್ಲಿನ ವಾಣಿಜ್ಯ ವಹಿವಾಟುಗಳು ಸುಲಲಿತ ಆಗಬೇಕು, ಹೊರೆ ಅನಿಸುವಂತಹ ತೆರಿಗೆ ಪ್ರಮಾಣ ಕಡಿಮೆ ಆಗಬೇಕು ಎಂದು ಕೂಡ ಅದು ಹೇಳಿದೆ.</p>.<p class="title">ಬ್ರಾಡ್ಬ್ಯಾಂಡ್ ಸೇವೆಗಳನ್ನು ಹೆಚ್ಚು ವ್ಯಾಪಕಗೊಳಿಸಲು ನೆರವಾಗುವ ‘ಸಾರ್ವಜನಿಕ ವೈ–ಫೈ’ ಕುರಿತ ಶಿಫಾರಸು ಸೇರಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಾಡಿರುವ ಇತರ ಹಲವು ಶಿಫಾರಸುಗಳ ವಿಚಾರವಾಗಿ ಇಲಾಖೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಬಿಐಎಫ್ ಒತ್ತಾಯಿಸಿದೆ.</p>.<p class="title">‘ದೂರಸಂಪರ್ಕ ಉದ್ಯಮವನ್ನು ಲಾಭದಾಯಕ ಆಗಿ ಮಾಡುವುದು ಹೇಗೆ, ಈ ಉದ್ಯಮವನ್ನು ಹೂಡಿಕೆದಾರರಿಗೆ ಆಕರ್ಷಕವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ದೇಶಕ್ಕೆ ಬಂಡವಾಳ ಹರಿದುಬರಬೇಕು ಎಂದಾದರೆ, ವಾಣಿಜ್ಯೋದ್ಯಮ ವಹಿವಾಟುಗಳು ಸುಲಲಿತ ಆಗಬೇಕು’ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ. ರಾಮಚಂದ್ರನ್ ಹೇಳಿದರು.</p>.<p class="title">ಟ್ರಾಯ್ ಮಾಡಿರುವ ಹಲವು ಶಿಫಾರಸುಗಳನ್ನು ಇಲಾಖೆಗೆ ಈಗಾಗಲೇ ರವಾನಿಸಲಾಗಿದೆ. ಆದರೆ, ಅವು ಅನುಷ್ಠಾನಕ್ಕೆ ಬಂದಿಲ್ಲ. ಈಗ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಹಾಗೆಯೇ, ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಅಂಶಗಳನ್ನು ಕೂಡ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong>ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೂರಸಂಪರ್ಕ ಕಂಪನಿಗಳಿಗೆ ಮುಂದಿನ ಹೆಜ್ಜೆಗಳ ಕುರಿತು ಸ್ಪಷ್ಟತೆ ತಂದುಕೊಟ್ಟಿರುವ ಕಾರಣ, ಈ ವಲಯವನ್ನು ಲಾಭದಾಯಕ ಆಗಿಸಲು ಕೇಂದ್ರ ದೂರಪಸಂಪರ್ಕ ಇಲಾಖೆ ಗಮನ ನೀಡಬೇಕು ಎಂದು ‘ಬ್ರಾಡ್ಬ್ಯಾಂಡ್ ಇಂಡಿಯಾ ಫೋರಂ’ (ಬಿಐಎಫ್) ಹೇಳಿದೆ.</p>.<p class="title">ದೂರಸಂಪರ್ಕ ವಲಯವು ಹೂಡಿಕೆದಾರರಿಗೆ ಆಕರ್ಷಕ ಅನಿಸುವಂತೆ ಮಾಡಬೇಕು, ಈ ವಲಯದಲ್ಲಿನ ವಾಣಿಜ್ಯ ವಹಿವಾಟುಗಳು ಸುಲಲಿತ ಆಗಬೇಕು, ಹೊರೆ ಅನಿಸುವಂತಹ ತೆರಿಗೆ ಪ್ರಮಾಣ ಕಡಿಮೆ ಆಗಬೇಕು ಎಂದು ಕೂಡ ಅದು ಹೇಳಿದೆ.</p>.<p class="title">ಬ್ರಾಡ್ಬ್ಯಾಂಡ್ ಸೇವೆಗಳನ್ನು ಹೆಚ್ಚು ವ್ಯಾಪಕಗೊಳಿಸಲು ನೆರವಾಗುವ ‘ಸಾರ್ವಜನಿಕ ವೈ–ಫೈ’ ಕುರಿತ ಶಿಫಾರಸು ಸೇರಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಾಡಿರುವ ಇತರ ಹಲವು ಶಿಫಾರಸುಗಳ ವಿಚಾರವಾಗಿ ಇಲಾಖೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಬಿಐಎಫ್ ಒತ್ತಾಯಿಸಿದೆ.</p>.<p class="title">‘ದೂರಸಂಪರ್ಕ ಉದ್ಯಮವನ್ನು ಲಾಭದಾಯಕ ಆಗಿ ಮಾಡುವುದು ಹೇಗೆ, ಈ ಉದ್ಯಮವನ್ನು ಹೂಡಿಕೆದಾರರಿಗೆ ಆಕರ್ಷಕವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ದೇಶಕ್ಕೆ ಬಂಡವಾಳ ಹರಿದುಬರಬೇಕು ಎಂದಾದರೆ, ವಾಣಿಜ್ಯೋದ್ಯಮ ವಹಿವಾಟುಗಳು ಸುಲಲಿತ ಆಗಬೇಕು’ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ. ರಾಮಚಂದ್ರನ್ ಹೇಳಿದರು.</p>.<p class="title">ಟ್ರಾಯ್ ಮಾಡಿರುವ ಹಲವು ಶಿಫಾರಸುಗಳನ್ನು ಇಲಾಖೆಗೆ ಈಗಾಗಲೇ ರವಾನಿಸಲಾಗಿದೆ. ಆದರೆ, ಅವು ಅನುಷ್ಠಾನಕ್ಕೆ ಬಂದಿಲ್ಲ. ಈಗ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಹಾಗೆಯೇ, ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಅಂಶಗಳನ್ನು ಕೂಡ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>