ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹೆಚ್ಚುವರಿಯಾಗಿ 6,750 ಟನ್‌ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ

Published : 4 ಮಾರ್ಚ್ 2024, 23:45 IST
Last Updated : 4 ಮಾರ್ಚ್ 2024, 23:45 IST
ಫಾಲೋ ಮಾಡಿ
Comments
ಮಾರಾಟಕ್ಕೆ ಬೆಳೆಗಾರರ ನಿರಾಸಕ್ತಿ
ಮಂಗಳೂರು: ಬೆಂಬಲ ಬೆಲೆಯಡಿ ಕೊಬ್ಬರಿ ಮಾರಾಟ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ಬೆಳೆಗಾರರು ಆಸಕ್ತಿ ತೋರಿಸಿಲ್ಲ. ‘ಜಿಲ್ಲೆಯಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ಬಂಟ್ವಾಳ ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಎರಡು ಕಡೆ ಸೇರಿ ಒಟ್ಟು ಏಳು ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ಯಾವ ತೆಂಗು ಬೆಳೆಗಾರರೂ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಹೆಸರು ನೋಂದಣಿಗೆ ಇಲ್ಲಿ ಸರ್ವರ್‌ ಸಮಸ್ಯೆ ಇಲ್ಲ. ಕರಾವಳಿ ಪ್ರದೇಶದಲ್ಲಿ ತೇವಾಂಶ ಹೆಚ್ಚು ಇರುವುದರಿಂದ ಉಂಡೆ ಕೊಬ್ಬರಿ ಬೇಗ ಹಾಳಾಗುತ್ತದೆ. ಅದರ ಬದಲು ಇಲ್ಲಿನ ತೆಂಗು ಬೆಳೆಗಾರರು ಮಿಲ್ಲಿಂಗ್‌ ಕೊಬ್ಬರಿಯನ್ನೇ (ಚಿಕ್ಕ ಚಿಕ್ಕ ತುಂಡು) ಹೆಚ್ಚಾಗಿ ತಯಾರಿಸುತ್ತಾರೆ. ಅವರು ಅದನ್ನು ನೇರವಾಗಿ ಗಾಣಗಳಿಗೆ ಒಯ್ದು ತೆಂಗಿನ ಎಣ್ಣೆ ಮಾಡಿಸುತ್ತಾರೆ. ಇಲ್ಲವಾದರೆ ಚಿಪ್ಪುಸಹಿತ ತೆಂಗಿನ ಕಾಯಿ ಮಾರುತ್ತಾರೆ’ ಎಂದು ವಿವರಿಸಿದರು. 
ಕೇಂದ್ರದ ಬಳಿ ಬೀಡುಬಿಟ್ಟ ರೈತರು 
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗದ ಎಪಿಎಂಸಿ ಆವರಣದಲ್ಲಿ 2 ಹಿರಿಯೂರು ಚಿತ್ರದುರ್ಗ ಹೊಳಲ್ಕೆರೆ ಹಾಗೂ ಶ್ರೀರಾಂಪುರದಲ್ಲಿ ತಲಾ 1 ಖರೀದಿ ಕೇಂದ್ರ ತೆರೆಯಲಾಗಿದೆ. ಬೆಳಿಗ್ಗೆ 8ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಸಂಜೆ 6ಕ್ಕೆ ಕೊನೆಗೊಂಡಿತು. ಚಿತ್ರದುರ್ಗ ಹಿರಿಯೂರು ಹೊಳಲ್ಕೆರೆ ಕೇಂದ್ರಗಳ ಬಳಿ ಹೊಸದುರ್ಗದಿಂದ ಬಂದಿದ್ದ ರೈತರು ಜಮಾಯಿಸಿದ್ದರು. ಹೊಸದುರ್ಗದಲ್ಲಿ ಭಾನುವಾರ ರಾತ್ರಿಯಿಂದಲೇ ರೈತರು ಖರೀದಿ ಕೇಂದ್ರದತ್ತ ಧಾವಿಸಿದ್ದರು. ಮೊದಲ ದಿನ 918 ರೈತರು 11862 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ರಾತ್ರಿಯವರೆಗೂ ಕೇಂದ್ರದ ಆವರಣದಲ್ಲಿ ರೈತರು ಬೀಡುಬಿಟ್ಟಿದ್ದರು. ‘ಎರಡೂ ಕಡೆ ನೋಂದಣಿಗೆ ಅವಕಾಶ ಕಲ್ಪಿಸಿದ್ದರೂ ಜನದಟ್ಟಣೆ ಕಡಿಮೆಯಾಗಿಲ್ಲ. ಭಾನುವಾರ ರಾತ್ರಿ 8ಗಂಟೆಗೆ ಖರೀದಿ ಕೇಂದ್ರಕ್ಕೆ ಬಂದಿದ್ದೇವೆ. ಸೋಮವಾರ ಬೆಳಿಗ್ಗೆ 8ಕ್ಕೆ ನೋಂದಣಿ ಆರಂಭವಾಗಿದೆ. ಬಿಸಿಲಿಗೆ ಸಾಕಾಗಿ ಹೋಗಿದೆ. ಶಾಮಿಯಾನ ಶೌಚಾಲಯದ ವ್ಯವಸ್ಥೆ ಸರಿ ಇರಲಿಲ್ಲ’ ಎಂದು ಮುತ್ತಾಗೊಂದಿ ರೈತ ನಿಂಗಪ್ಪ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT