ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ರಾಜ್ಯಕ್ಕೆ ವಾರ್ಷಿಕ 15 ಲಕ್ಷ ಟನ್ ಯೂರಿಯಾ ರಸಗೊಬ್ಬರ ಬೇಕಿದೆ. ಮಂಗಳೂರು ಕೆಮಿಕಲ್ ಅಂಡ್ ಫರ್ಟಿಲೈಸರ್ಸ್ನಲ್ಲಿ (ಎಂಸಿಎಫ್) ವಾರ್ಷಿಕ 4.5 ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಮಹಾಮಂಡಳದಿಂದ ಗೊಬ್ಬರ ಕಾರ್ಖಾನೆ ಆರಂಭಿಸಲು ಯೋಚಿಸಲಾಗಿದೆ’ ಎಂದರು.