ಬೆಂಗಳೂರು: ಕೋವಿಡ್ ಸಾಂಕ್ರಾಮಿಕಕ್ಕೆ ಬಲಿಯಾದ ತನ್ನ ವಾಣಿಜ್ಯ ಪಾಲುದಾರರ ಕುಟುಂಬದ ಸದಸ್ಯರಿಗೆ ವೇದಾಂತ ಕಂಪನಿಯು ₹ 10 ಲಕ್ಷ ಪರಿಹಾರ ನೀಡಲಿದೆ. ಅಲ್ಲದೆ, ಮೃತ ನೌಕರರ ಕಡೆಯ ತಿಂಗಳ ಸಂಬಳದ ಮೊತ್ತವನ್ನು ಅವರ ಕುಟುಂಬಕ್ಕೆ, ನೌಕರ ಜೀವಂತವಾಗಿದ್ದಿದ್ದರೆ ಎಷ್ಟು ವರ್ಷ ಕೆಲಸ ಮಾಡುತ್ತಿದ್ದನೋ ಅಷ್ಟು ವರ್ಷದವರೆಗೆ ಕಂಪನಿ ನೀಡಲಿದೆ.