ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾಂತ: ನೌಕರರ ಕುಟುಂಬಕ್ಕೆ ನೆರವು

Last Updated 14 ಜೂನ್ 2021, 16:20 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕಕ್ಕೆ ಬಲಿಯಾದ ತನ್ನ ವಾಣಿಜ್ಯ ಪಾಲುದಾರರ ಕುಟುಂಬದ ಸದಸ್ಯರಿಗೆ ವೇದಾಂತ ಕಂಪನಿಯು ₹ 10 ಲಕ್ಷ ಪರಿಹಾರ ನೀಡಲಿದೆ. ಅಲ್ಲದೆ, ಮೃತ ನೌಕರರ ಕಡೆಯ ತಿಂಗಳ ಸಂಬಳದ ಮೊತ್ತವನ್ನು ಅವರ ಕುಟುಂಬಕ್ಕೆ, ನೌಕರ ಜೀವಂತವಾಗಿದ್ದಿದ್ದರೆ ಎಷ್ಟು ವರ್ಷ ಕೆಲಸ ಮಾಡುತ್ತಿದ್ದನೋ ಅಷ್ಟು ವರ್ಷದವರೆಗೆ ಕಂಪನಿ ನೀಡಲಿದೆ.

ಮೃತ ನೌಕರರ ಇಬ್ಬರು ಮಕ್ಕಳಿಗೆ ಅವರ ಪದವಿ ಶಿಕ್ಷಣದವರೆಗೆ ಕಂಪನಿ ನೆರವು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ. ‘ನಮ್ಮ ನೌಕರರು ಹಾಗೂ ವಾಣಿಜ್ಯ ಪಾಲುದಾರರು ನಮ್ಮ ಪಾಲಿನ ಅತಿದೊಡ್ಡ ಸಂಪನ್ಮೂಲ. ಅವರ ಸುರಕ್ಷತೆ ಹಾಗೂ ಕ್ಷೇಮ ನಮಗೆ ಬಹಳ ಮುಖ್ಯ’ ಎಂದು ಕಂಪನಿಯ ಅಧ್ಯಕ್ಷ ಅನಿಲ್ ಅಗರ್ವಾಲ್ ಹೇಳಿದ್ದಾರೆ. ತನ್ನ ನೌಕರರು ಹಾಗೂ ವಾಣಿಜ್ಯ ಪಾಲುದಾರರಿಗೆ ಲಸಿಕೆ ನೀಡಲು ಕಂಪನಿಯು ಒಟ್ಟು ₹ 12.6 ಕೋಟಿ ವೆಚ್ಚ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT