ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಇರುವ ವಿಸ್ಟ್ರಾನ್ ಕಂಪನಿಯ ಕಾರ್ಖಾನೆಯಲ್ಲಿ ವೇತನ ಪಾವತಿ ವಿಚಾರವಾಗಿ ಕೆಲವು ಕೆಲಸಗಾರರು ಈಚೆಗೆ ದಾಂದಲೆ ನಡೆಸಿದ್ದರು. ಇದಾದ ನಂತರ ವಿಸ್ಟ್ರಾನ್ ಕಂಪನಿಯು ಆಂತರಿಕ ತನಿಖೆಯೊಂದನ್ನು ಕೈಗೊಂಡಿತ್ತು. ‘ಕಾರ್ಮಿಕ ಏಜೆನ್ಸಿಗಳನ್ನು ಮತ್ತು ಪಾವತಿ ಕೆಲಸಗಳನ್ನು ನೋಡಿಕೊಳ್ಳುವ ಪ್ರಕ್ರಿಯೆಗಳನ್ನು ಇನ್ನಷ್ಟು ಬಲಪಡಿಸಬೇಕಿದೆ. ಇವುಗಳನ್ನು ಸರಿಪಡಿಸಲು ನಾವು ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದೇವೆ, ಶಿಸ್ತು ಕ್ರಮ ಜಾರಿಗೊಳಿಸುವುದೂ ಇದರಲ್ಲಿ ಸೇರಿದೆ’ ಎಂದು ವಿಸ್ಟ್ರಾನ್ ಹೇಳಿದೆ.