‘ವಿದೇಶದಿಂದ ಕಪ್ಪುಹಣ ಹೊರತರುವಲ್ಲಿ, ಗಂಗಾ ನದಿ ಶುದ್ಧೀಕರಣ ವಿಚಾರದಲ್ಲಿ ಉತ್ತಮ ಕೆಲಸ ನಡೆದಿಲ್ಲ ಎಂದಿದ್ದೆ. ಆದರೆ, ಮಾಧ್ಯಮಗಳಲ್ಲಿ ಬೇರೆ ರೀತಿಯ ಹೆಡ್ಲೈನ್ ಬಂದಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕೆ ಖುದ್ದಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಅಂದು ಮಾತನಾಡುವಾಗ ಮೈಕ್ ಇರಲಿಲ್ಲ. ಹೀಗಾಗಿ, ನಾನು ಹೇಳಿದ್ದು ಕೆಲವರಿಗೆ ಸರಿಯಾಗಿ ಕೇಳಿಸದೆ ತಪ್ಪಾಗಿರಬಹುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.