ಬೆಂಗಳೂರು: ಆರ್ಥಿಕ ಗಣತಿ ಕರಡನ್ನು ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮಾರ್ಚ್ ವೇಳೆಗೆ ಅಂತಿಮ ವರದಿ ಲಭ್ಯವಾಗಲಿದೆ ಎಂದು ಯೋಜನಾ ಸಚಿವ ಎಸ್.ಆರ್.ಪಾಟೀಲ ತಿಳಿಸಿದರು.
ಮುಖ್ಯ ಯೋಜನಾಧಿಕಾರಿ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಪ್ರಾದೇಶಿಕ ಅಸಮತೋಲನ, ಉದ್ಯೋಗ ಸೃಷ್ಟಿ, ಉತ್ಪಾದನೆ, ಸಂಘ ಟಿತ ಮತ್ತು ಅಸಂಘಟಿತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸು ತ್ತಿರುವವರ ಮಾಹಿತಿ ಗಣತಿಯಿಂದ ಲಭ್ಯವಾಗಲಿದೆ. ಈಗಾಗಲೇ ಶೇ 70ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಜನ ಯಾವ ರೀತಿಯ ಆರ್ಥಿಕ ಚಟು ವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದು ಗಣತಿ ಮೂಲಕ ತಿಳಿಯಲಿದೆ. ಯಾವ ಕ್ಷೇತ್ರದಲ್ಲಿ ಹಿಂದೆ ಇದ್ದಾರೆ ಎಂಬುದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕೌಶಲ್ಯ ವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾ ಗುವುದು ಎಂದರು.
2005ರಲ್ಲಿ ಆರ್ಥಿಕ ಗಣತಿ ಕಾರ್ಯ ನಡೆದಿತ್ತು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಕೇಂದ್ರದ ಸೂಚನೆ ಆಧರಿಸಿ ಗಣತಿ ಕಾರ್ಯ ಕೈಗೆತ್ತಿಕೊ ಳ್ಳಲಾಗಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ತಿಳಿಸಿದರು.
ಗಣತಿ ನಂತರ ಮಾನವ ಅಭಿವೃದ್ಧಿ ವರದಿಯಲ್ಲಿ ಸಮಗ್ರವಾದ ವಿವರಗಳು ಲಭ್ಯವಾಗಲಿವೆ. ಅದನ್ನು ಆಧರಿಸಿ ತಾಲ್ಲೂಕುವಾರು ರ್ಯಾಂಕಿಂಗ್ ನೀಡಲಾಗುವುದು ಎಂದರು.