ಬೆಂಗಳೂರು: ಕಾನೂನು ಮಾಪನ ಇಲಾಖೆ ಚಟುವಟಿಕೆಗಳನ್ನು ಗಣಕೀಕೃತ ಗೊಳಿಸುವ ‘ಇ–ಮಾಪನ’ ಯೋಜನೆಗೆ ಬುಧವಾರ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
‘ಈವರೆಗೆ ತೂಕ ಮತ್ತು ಅಳತೆ ಮಾಪನ ಕ್ರಿಯೆ ಕೈಬರಹದಲ್ಲಿ ನಡೆಯು ತ್ತಿತ್ತು. ಇದರಿಂದ ಮಾಪನದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದವು. ‘ಇ–ಮಾಪನ’ ಯೋಜನೆಯಿಂದ ನಿಖರ ಮಾಪನ ಸಾಧ್ಯ. ಆಡಳಿತವೂ ಪಾರದರ್ಶಕವಾಗಿ ಗ್ರಾಹಕ ಸ್ನೇಹಿಯಾಗಲಿದೆ’ ಎಂದರು.
‘ಇಲಾಖೆಯನ್ನು ಕಾಗದ ರಹಿತವಾ ಗಿಸುವ ಗುರಿ ಇದ್ದು, ಇಲಾಖೆಯ ಎಲ್ಲ ಕಚೇರಿಗೆ ಹಾಗೂ ಅಧಿಕಾರಿಗಳಿಗೆ ಲ್ಯಾಪ್ ಟಾಪ್, ಮೊಬೈಲ್ ಪ್ರಿಂಟರ್, ಇಂಟ ರ್ನೆಟ್ ಡಾಟಾ ಕಾರ್ಡ್, ಡಿಜಿಟಲ್ ಸಿಗ್ನೇ ಚರ್ ಕಾರ್ಡ್ ನೀಡಲಾಗಿದೆ’ ಎಂದರು.
ಸಾರಿಗೆ ಇಲಾಖೆ ಸಮನ್ವಯ: ‘ಆಟೊ ರಿಕ್ಷಾಗಳಿಗೆ ಮೀಟರ್ ಅಳವಡಿಸುವಾಗ ಮೊದಲು ನಮ್ಮ ಇಲಾಖೆ ಪ್ರಮಾಣಪತ್ರ ಕೊಡಬೇಕು. ನಂತರ ಸಾರಿಗೆ ಇಲಾಖೆ ಅರ್ಹತಾ ಪತ್ರ ಕೊಡುತ್ತದೆ. ಇನ್ನು ಮುಂದೆ ಸಾರಿಗೆ ಇಲಾಖೆ ಜತೆ ಸಮನ್ವಯ ಸಾಧಿಸಿ ಅವರಲ್ಲಿನ ದತ್ತಾಂಶಗಳನ್ನು ಬಳಸಲಾಗುವುದು’ ಎಂದರು.