‘ಶ್ರೀರಾಂಪುರ, ಹುಳಿಯಾರು, ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಸಂಚರಿಸುವವರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಒಂದು ತಾಸು ಕಾದರೂ ಬಸ್ ಬಂದಿಲ್ಲ. ಬೆಂಗಳೂರಿನಿಂದ ಬಂದು ವಾಪಸ್ ಹೋಗುವಾಗ
ಇಲ್ಲಿ ಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ನಿಲುಗಡೆ. ಮಧ್ಯೆ ಎಲ್ಲಿಯೂ ನಿಲ್ಲಿಸುವುದಿಲ್ಲ ಎಂದು ಬಸ್ ನಿರ್ವಾಹಕರು ಹೇಳುತ್ತಿದ್ದರು. ಹೊಸದುರ್ಗದಿಂದ ಹೋಗಿ 25 ಕಿ.ಮೀ. ದೂರದ ಶ್ರೀರಾಂಪುರದಲ್ಲಿ ಇಳಿದರೂ ಬೆಂಗಳೂರು ಬಸ್ ಚಾರ್ಜ್ (₹ 150) ಕೊಡಬೇಕು ಎಂದು ಕೇಳುತ್ತಿದ್ದರು. ₹25 ರ ಬದಲು ₹150 ಏಕೆ ಕೊಡಬೇಕು ಎಂದು ತಿಳಿಯುತ್ತಿಲ್ಲ’ ಎಂದು ಪ್ರಯಾಣಿಕ ನಾಗೇಂದ್ರ ಪ್ರಶ್ನಿಸಿದರು.