<p>ಇವರ ಹೆಸರು ಪ್ರೊಫೆಸರ್ ಶೋಜಿ ಶೀಬಾ. ಇವರು ಜಪಾನಿನ ಸುಬಾಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅದಲ್ಲದೇ ಅಮೇರಿಕೆಯ ಖ್ಯಾತ ಎಂ.ಐ.ಟಿ. ವಿಶ್ವವಿದ್ಯಾಲಯದ ಸ್ಲೋಅನ್ ಸ್ಕೂಲ್ ಆಫ್ ಮ್ಯೋನೇಜಮೆಂಟಿನಲ್ಲಿ ಗೌರವ ಅಧ್ಯಾಪಕರು. <br /> <br /> ಅವರಿಗೆ ಜಪಾನ್ ಚಕ್ರವರ್ತಿ ಇದೇ ಜುಲೈ 5ರಂದು ತಮ್ಮ ದೇಶದ ಸರ್ವಶ್ರೇಷ್ಠ ಪ್ರಶಸ್ತಿಯಾದ ಆರ್ಡರ್ ಆಫ್ ಸೇಕ್ರೆಡ್ ಟ್ರೆಜರ್ನ್ನು ನೀಡಿ ಗೌರವಿಸಿದರು. ಇದು ಶೀಬಾರವರು ಭಾರತ ಮತ್ತು ಜಪಾನುಗಳ ನಡುವೆ ಶೈಕ್ಷಣಿಕ ಸಂಬಂಧಗಳಿಗೆ ನೀಡಿದ ಕಾಣಿಕೆ.<br /> <br /> ಅವರು ಭಾರತದಲ್ಲಿ ವಿಷನರಿ ಲೀಡರ್ಶಿಪ್ ಇನ್ ಮ್ಯೋನೇಜಮೆಂಟ್ (ಆಡಳಿತದಲ್ಲಿ ದಾರ್ಶನಿಕ ನಾಯಕತ್ವ) ಎಂಬ ವಿಷಯದಲ್ಲಿ ಪಾಠ ಮಾಡುತ್ತಾರೆ. <br /> <br /> ಈ ಕಾರ್ಯಕ್ರಮ ಐ.ಐ.ಎಂ ಕೋಲ್ಕತ್ತಾ, ಐಐಟಿ ಕಾನ್ಪುರ, ಐಐಟಿ ಚೆನ್ನೈ, ಭಾರತದ ಮಾನವ ಸಂಪನ್ಮೂಲ ಇಲಾಖೆ ಮತ್ತು ಜಪಾನಿನ ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮ. ಈ ಪ್ರಕ್ರಿಯೆಗೆ ಪ್ರೊಫೆೆಸರ್ ಶೀಬಾ ಮುಖ್ಯ ಸಲಹೆಗಾರರು.<br /> <br /> ಈ ಎಲ್ಲ ಪೀಠಿಕೆ ಅವರು ಎಷ್ಟು ದೊಡ್ಡ ಹುದ್ದೆಯಲ್ಲಿದ್ದಾರೆ ಎಂಬುದನ್ನು ಹೇಳುವುದಕ್ಕಲ್ಲ. ಅವರು ಎಷ್ಟು ದೊಡ್ಡ ವ್ಯಕ್ತಿ, ಅವರ ಕಾರ್ಯಶ್ರದ್ಧೆ ಎಂತಹುದು ಎಂಬುದನ್ನು ತಿಳಿಸುವುದಕ್ಕೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಪಾನಿನ ಪೂರ್ವಭಾಗದಲ್ಲಿ ಭಾರೀ ಭೂಕಂಪವಾಯಿತು. <br /> <br /> ಅದು ಸಾಲದೆಂಬಂತೆ ಸುನಾಮಿ ಬಂದು ತೀರವನ್ನು ಅಪ್ಪಳಿಸಿ ಆ ಭಾಗವನ್ನೆಲ್ಲ ನಿರ್ನಾಮಗೊಳಿಸಿತು. ಅಲ್ಲಿ ಜನವಸತಿ ಇತ್ತೆಂಬುದು ಕೂಡ ಅರಿವಾಗದಷ್ಟು ಆ ಪ್ರದೇಶ ನಾಮಾವಶೇಷವಾಗಿತ್ತು. ಈ ತಾಂಡವನೃತ್ಯದಲ್ಲಿ ಪ್ರೊಫೆಸರ್ ಶೀಬಾರ ಮನೆ ಕೊಚ್ಚಿ ಹೋಯಿತು. ತನ್ನದೆನ್ನುವುದು ಏನೂ ಉಳಿಯಲಿಲ್ಲ.<br /> <br /> ಆದರೂ ಪ್ರತಿವರ್ಷದಂತೆ ಐ.ಐ.ಎಂ ಕೋಲ್ಕತ್ತಕ್ಕೆ ಪಾಠ ಮಾಡಲು ಏಪ್ರಿಲ್ ಮೊದಲನೇ ವಾರದಲ್ಲಿ ಭಾರತಕ್ಕೆ ಬಂದರು. ಮನೆಯಲ್ಲಿ ಈ ಪರಿಸ್ಥಿತಿ ಇರುವಾಗ ಅವರು ಇಲ್ಲಿಗೆ ಬಂದದ್ದೇ ಆಶ್ಚರ್ಯ. <br /> <br /> `ಯಾಕೆ ಬಂದಿರಿ ದೇಶದ ನಿಮ್ಮ ಭಾಗದಲ್ಲಿ ಈ ಅನಾಹುತವಾಗಿದ್ದಾಗ~ ಎಂದು ಕೇಳಿದಾಗ, `ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೆನೆಂದು ಮಾತು ಕೊಟ್ಟಿದ್ದೆನಲ್ಲವೇ? ಆದ್ದರಿಂದ ಅದನ್ನು ನಡೆಸಲೇ ಬೇಕು~ ಎಂದರು. <br /> <br /> ಅವರು ತಮ್ಮ ತರಗತಿಗಳನ್ನು ತೆಗೆದುಕೊಳ್ಳುತ್ತಿರುವಾಗ ಜಪಾನಿನಲ್ಲಿ ಅವರ ತಾಯಿ ತೀರಿಹೋದ ಸಮಾಚಾರ ಬಂದಿತು. ಅವರು ತಕ್ಷಣ ತಮ್ಮ ದೇಶಕ್ಕೆ ತೆರಳದೇ ತಮಗಾಗಿ ಇದ್ದ ತರಗತಿಗಳನ್ನೆಲ್ಲ ಮುಗಿಸಿ ಹೊರಟರು. <br /> <br /> ಇವರ ಕಾರ್ಯಶ್ರದ್ಧೆಯನ್ನು, ಪ್ರಾಮಾಣಿಕತೆಯನ್ನು ಮೆಚ್ಚಿದ ಈ ಕಾರ್ಯಕ್ರಮದ ಐದನೇ ತಂಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಐ.ಐ.ಎಂ ಪ್ರಾಧ್ಯಾಪಕರು ಎದ್ದು ನಿಂತು ಸತತವಾಗಿ ಚಪ್ಪಾಳೆ ತಟ್ಟಿ ತಮ್ಮ ಅಭಿನಂದನೆಗಳನ್ನೂ, ಕೃತಜ್ಞತೆಯನ್ನು ತೋರಿಸಿದರು.<br /> <br /> ದೊಡ್ಡ ದೊಡ್ಡ ಸ್ಥಾನಗಳು ಜೀವನದಲ್ಲಿ ನಿಮ್ಮ ಶಿಕ್ಷಣ, ಅವಕಾಶಗಳಿಂದಾಗಿ ದೊರೆತಾವು. ಆದರೆ ದೊಡ್ಡತನ ಬರುವುದು ನಮ್ಮ ನಡತೆಯಿಂದ, ಕಷ್ಟದ ಸ್ಥಿತಿಯಲ್ಲಿ ನಾವು ತೋರುವ ತಾಳ್ಮೆ, ಗಂಭೀರತೆ ಇವುಗಳಿಂದ. ಇಂಥ ಗುಣಗಳಿಂದಲೇ ಪ್ರೊಫೆಸರ್ ಶೀಬಾರಂಥವರು ಸರ್ವಮಾನ್ಯರಾಗುತ್ತಾರೆ, ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ.<br /> (ಈ ಘಟನೆಯನ್ನು ತಿಳಿಸಿದವರು ನನಗೆ ಆತ್ಮೀಯರಾದ ಐ.ಐ.ಎಂ ಕೋಲ್ಕತ್ತಾದ ಪ್ರೊಫೆಸರ್ ಸಿ.ಪಿ. ಭಟ್ಟರವರು)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇವರ ಹೆಸರು ಪ್ರೊಫೆಸರ್ ಶೋಜಿ ಶೀಬಾ. ಇವರು ಜಪಾನಿನ ಸುಬಾಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅದಲ್ಲದೇ ಅಮೇರಿಕೆಯ ಖ್ಯಾತ ಎಂ.ಐ.ಟಿ. ವಿಶ್ವವಿದ್ಯಾಲಯದ ಸ್ಲೋಅನ್ ಸ್ಕೂಲ್ ಆಫ್ ಮ್ಯೋನೇಜಮೆಂಟಿನಲ್ಲಿ ಗೌರವ ಅಧ್ಯಾಪಕರು. <br /> <br /> ಅವರಿಗೆ ಜಪಾನ್ ಚಕ್ರವರ್ತಿ ಇದೇ ಜುಲೈ 5ರಂದು ತಮ್ಮ ದೇಶದ ಸರ್ವಶ್ರೇಷ್ಠ ಪ್ರಶಸ್ತಿಯಾದ ಆರ್ಡರ್ ಆಫ್ ಸೇಕ್ರೆಡ್ ಟ್ರೆಜರ್ನ್ನು ನೀಡಿ ಗೌರವಿಸಿದರು. ಇದು ಶೀಬಾರವರು ಭಾರತ ಮತ್ತು ಜಪಾನುಗಳ ನಡುವೆ ಶೈಕ್ಷಣಿಕ ಸಂಬಂಧಗಳಿಗೆ ನೀಡಿದ ಕಾಣಿಕೆ.<br /> <br /> ಅವರು ಭಾರತದಲ್ಲಿ ವಿಷನರಿ ಲೀಡರ್ಶಿಪ್ ಇನ್ ಮ್ಯೋನೇಜಮೆಂಟ್ (ಆಡಳಿತದಲ್ಲಿ ದಾರ್ಶನಿಕ ನಾಯಕತ್ವ) ಎಂಬ ವಿಷಯದಲ್ಲಿ ಪಾಠ ಮಾಡುತ್ತಾರೆ. <br /> <br /> ಈ ಕಾರ್ಯಕ್ರಮ ಐ.ಐ.ಎಂ ಕೋಲ್ಕತ್ತಾ, ಐಐಟಿ ಕಾನ್ಪುರ, ಐಐಟಿ ಚೆನ್ನೈ, ಭಾರತದ ಮಾನವ ಸಂಪನ್ಮೂಲ ಇಲಾಖೆ ಮತ್ತು ಜಪಾನಿನ ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮ. ಈ ಪ್ರಕ್ರಿಯೆಗೆ ಪ್ರೊಫೆೆಸರ್ ಶೀಬಾ ಮುಖ್ಯ ಸಲಹೆಗಾರರು.<br /> <br /> ಈ ಎಲ್ಲ ಪೀಠಿಕೆ ಅವರು ಎಷ್ಟು ದೊಡ್ಡ ಹುದ್ದೆಯಲ್ಲಿದ್ದಾರೆ ಎಂಬುದನ್ನು ಹೇಳುವುದಕ್ಕಲ್ಲ. ಅವರು ಎಷ್ಟು ದೊಡ್ಡ ವ್ಯಕ್ತಿ, ಅವರ ಕಾರ್ಯಶ್ರದ್ಧೆ ಎಂತಹುದು ಎಂಬುದನ್ನು ತಿಳಿಸುವುದಕ್ಕೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಪಾನಿನ ಪೂರ್ವಭಾಗದಲ್ಲಿ ಭಾರೀ ಭೂಕಂಪವಾಯಿತು. <br /> <br /> ಅದು ಸಾಲದೆಂಬಂತೆ ಸುನಾಮಿ ಬಂದು ತೀರವನ್ನು ಅಪ್ಪಳಿಸಿ ಆ ಭಾಗವನ್ನೆಲ್ಲ ನಿರ್ನಾಮಗೊಳಿಸಿತು. ಅಲ್ಲಿ ಜನವಸತಿ ಇತ್ತೆಂಬುದು ಕೂಡ ಅರಿವಾಗದಷ್ಟು ಆ ಪ್ರದೇಶ ನಾಮಾವಶೇಷವಾಗಿತ್ತು. ಈ ತಾಂಡವನೃತ್ಯದಲ್ಲಿ ಪ್ರೊಫೆಸರ್ ಶೀಬಾರ ಮನೆ ಕೊಚ್ಚಿ ಹೋಯಿತು. ತನ್ನದೆನ್ನುವುದು ಏನೂ ಉಳಿಯಲಿಲ್ಲ.<br /> <br /> ಆದರೂ ಪ್ರತಿವರ್ಷದಂತೆ ಐ.ಐ.ಎಂ ಕೋಲ್ಕತ್ತಕ್ಕೆ ಪಾಠ ಮಾಡಲು ಏಪ್ರಿಲ್ ಮೊದಲನೇ ವಾರದಲ್ಲಿ ಭಾರತಕ್ಕೆ ಬಂದರು. ಮನೆಯಲ್ಲಿ ಈ ಪರಿಸ್ಥಿತಿ ಇರುವಾಗ ಅವರು ಇಲ್ಲಿಗೆ ಬಂದದ್ದೇ ಆಶ್ಚರ್ಯ. <br /> <br /> `ಯಾಕೆ ಬಂದಿರಿ ದೇಶದ ನಿಮ್ಮ ಭಾಗದಲ್ಲಿ ಈ ಅನಾಹುತವಾಗಿದ್ದಾಗ~ ಎಂದು ಕೇಳಿದಾಗ, `ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೆನೆಂದು ಮಾತು ಕೊಟ್ಟಿದ್ದೆನಲ್ಲವೇ? ಆದ್ದರಿಂದ ಅದನ್ನು ನಡೆಸಲೇ ಬೇಕು~ ಎಂದರು. <br /> <br /> ಅವರು ತಮ್ಮ ತರಗತಿಗಳನ್ನು ತೆಗೆದುಕೊಳ್ಳುತ್ತಿರುವಾಗ ಜಪಾನಿನಲ್ಲಿ ಅವರ ತಾಯಿ ತೀರಿಹೋದ ಸಮಾಚಾರ ಬಂದಿತು. ಅವರು ತಕ್ಷಣ ತಮ್ಮ ದೇಶಕ್ಕೆ ತೆರಳದೇ ತಮಗಾಗಿ ಇದ್ದ ತರಗತಿಗಳನ್ನೆಲ್ಲ ಮುಗಿಸಿ ಹೊರಟರು. <br /> <br /> ಇವರ ಕಾರ್ಯಶ್ರದ್ಧೆಯನ್ನು, ಪ್ರಾಮಾಣಿಕತೆಯನ್ನು ಮೆಚ್ಚಿದ ಈ ಕಾರ್ಯಕ್ರಮದ ಐದನೇ ತಂಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಐ.ಐ.ಎಂ ಪ್ರಾಧ್ಯಾಪಕರು ಎದ್ದು ನಿಂತು ಸತತವಾಗಿ ಚಪ್ಪಾಳೆ ತಟ್ಟಿ ತಮ್ಮ ಅಭಿನಂದನೆಗಳನ್ನೂ, ಕೃತಜ್ಞತೆಯನ್ನು ತೋರಿಸಿದರು.<br /> <br /> ದೊಡ್ಡ ದೊಡ್ಡ ಸ್ಥಾನಗಳು ಜೀವನದಲ್ಲಿ ನಿಮ್ಮ ಶಿಕ್ಷಣ, ಅವಕಾಶಗಳಿಂದಾಗಿ ದೊರೆತಾವು. ಆದರೆ ದೊಡ್ಡತನ ಬರುವುದು ನಮ್ಮ ನಡತೆಯಿಂದ, ಕಷ್ಟದ ಸ್ಥಿತಿಯಲ್ಲಿ ನಾವು ತೋರುವ ತಾಳ್ಮೆ, ಗಂಭೀರತೆ ಇವುಗಳಿಂದ. ಇಂಥ ಗುಣಗಳಿಂದಲೇ ಪ್ರೊಫೆಸರ್ ಶೀಬಾರಂಥವರು ಸರ್ವಮಾನ್ಯರಾಗುತ್ತಾರೆ, ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ.<br /> (ಈ ಘಟನೆಯನ್ನು ತಿಳಿಸಿದವರು ನನಗೆ ಆತ್ಮೀಯರಾದ ಐ.ಐ.ಎಂ ಕೋಲ್ಕತ್ತಾದ ಪ್ರೊಫೆಸರ್ ಸಿ.ಪಿ. ಭಟ್ಟರವರು)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>