ಗಂಭೀರ ಅಪರಾಧ ಕೃತ್ಯಗಳು ನಡೆದಿರುವ ಆರೋಪಗಳ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವರ್ತಿಸುತ್ತಿರುವ ರೀತಿ, ತನಿಖೆಯ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟಿಸುವಂತಿದೆ. ಜನರ ಮನಸ್ಸಿನಲ್ಲಿರುವ ಗೊಂದಲಗಳ ನಿವಾರಣೆಯ ಬದಲು, ಅನುಮಾನಗಳನ್ನು ಹೆಚ್ಚಿಸುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಸತ್ಯಸಂಗತಿ ಬೆಳಕಿಗೆ ಬರುವುದು ವಿರೋಧ ಪಕ್ಷಕ್ಕೂ ಬೇಕಾಗಿರುವಂತೆ ಕಾಣಿಸುತ್ತಿಲ್ಲ.