‘ಹೆಳವನ ಹೆಗಲ ಮೇಲೆ...’ (ವಾ.ವಾ., ಮೇ 29) ಎಂಬ ಡಾ.ಜಿ. ಕೃಷ್ಣಪ್ಪ ಅವರ ಪತ್ರಕ್ಕೆ ಈ ಪ್ರತಿಕ್ರಿಯೆ.
ಹರಿಹರನ ಮಾತನ್ನು ನೆನಪು ಮಾಡಿಕೊಟ್ಟಿರುವುದಕ್ಕೆ ಅವರಿಗೆ ಧನ್ಯವಾದಗಳು. ಹರಿಹರನಲ್ಲಿ ಕುರುಡನ ಹೆಗಲ ಮೇಲೆ ಹೆಳವ ಕುಳಿತಿದ್ದಾನೆ. ಆದರೆ, ಅಡಿಗರಲ್ಲಿ ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ. ಈ ವ್ಯತ್ಯಾಸವನ್ನು ಗಮನಿಸಬೇಕು.