ಭಾರತದ ಗಣತಂತ್ರ ವ್ಯವಸ್ಥೆಯು ಒಕ್ಕೂಟ ಸರ್ಕಾರದ ಮಹತ್ವವನ್ನು ಹೇಳುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅನನ್ಯ ಸಂಬಂಧವನ್ನೂ ಮನಗಾಣಿಸುತ್ತದೆ. ಮಹತ್ವಾಕಾಂಕ್ಷೆಯ ಈ ಗಣತಂತ್ರ ವ್ಯವಸ್ಥೆ ವರ್ತಮಾನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ನಾಗರಿಕರ ನಿರೀಕ್ಷೆ ಮತ್ತು ಆತಂಕಗಳಿಗೆ ಸ್ಪಂದಿಸಬೇಕಾಗಿದೆ.