ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಇದೀಗ ಎಲ್ಲೆಡೆ ನವರಾತ್ರಿಯ ಸಂಭ್ರಮ ಮೇಳೈಸಿದೆ. ದೇವಿಯ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಮಹಾಲಯ ಅಮಾವಾಸ್ಯೆ ಬಳಿಕ ಶಕ್ತಿ ದೇವತೆ, ನಾಡ ದೇವತೆ, ಅಂಬಾ ಭವಾನಿ, ದುರ್ಗಾ ಮಾತೆ ಹೆಸರಿನಲ್ಲಿ ದೇವಿ ಪ್ರತಿಷ್ಠಾಪನೆ ನಡೆದಿದ್ದು, ಕೆಲವೆಡೆ ಶನಿವಾರವೂ ಮುಂದುವರೆಯಿತು.