ದೇವರು ಇದ್ದಾನೆ ಎಂದು ಬಹುಪಾಲು ಜನ ನಂಬಿದ್ದಾರೆ. ದೇವರು ಎಂಬುದು ಸುಳ್ಳು, ಇದೊಂದು ಭ್ರಾಂತಿ ಎಂಬುದು ನಾಸ್ತಿಕರ ವಾದ. ದೇವರು ಇದ್ದಾನೆ ಎಂದು ನಂಬಿರುವ ಬಹುಪಾಲು ಜನಕ್ಕೆ ದೇವರ ಸ್ವರೂಪವೇನು ಎಂಬುದು ತಿಳಿದಿಲ್ಲ. ಹಲವಾರು ರೂಪಗಳನ್ನು ಕಲ್ಪಿಸಿಕೊಂಡು ಅವರೇ ದೇವರು ಎನ್ನುತ್ತಾರೆ. ಶಿವ, ವಿಷ್ಟು, ರಾಮ, ಕೃಷ್ಣ, ಹನಮಂತ, ಗಣೇಶ, ದೇವಿ ಹೀಗೆ ದೇವರು ಎಂದು ಪಟಗಳಲ್ಲಿ ಕಾಣಿಸಿಕೊಳ್ಳುವ ಕಾರ್ಯ ಮುಂದುವರಿಯುತ್ತದೆ.