ಇಲ್ಲಿ ಬೆಳಕು ಎಂದರೆ ಜ್ಞಾನ; ಕತ್ತಲೆ ಎಂದರೆ ಅಜ್ಞಾನ. ಬೆಳಕು ಮೂಡಿದ ಕೂಡಲೇ ಕತ್ತಲೆ ನಾಶವಾಗುತ್ತದೆ, ಮರೆಯಾಗುತ್ತದೆ ಎಂದರೆ ಜ್ಞಾನವು ಮೂಡಿದ ಕೂಡಲೇ ನಮ್ಮ ಅಜ್ಞಾನ ತೊಲಗಿಹೋಗುತ್ತದೆ ಎಂಬುದು ಇಲ್ಲಿಯ ಭಾವ. ಅಜ್ಞಾನ ನಾಶವಾಗಿ ಜ್ಞಾನ ಮೂಡಿದಾಗ ನಮಗೆ ಒದಗುವ ಅರಿವೇ ಅದ್ವಯ ಬ್ರಹ್ಮಾನಂದರಸ ಎನ್ನುವುದು ಶಾಸ್ತ್ರದ ಮಾತು; ಎಂದರೆ ಎರಡನೆಯ ವಸ್ತುವೇ ಇಲ್ಲದ ಕೇವಲಾನಭವ ಪ್ರಾಪ್ತವಾಗುತ್ತದೆ; ಇದೇ ಬ್ರಹ್ಮಾನಂದರಸ.