<p>ಇತೋ ನ ಕಿಂಚಿತ್ಪರತೋ ನ ಕಿಂಚಿತ್</p>.<p>ಯತೋ ಯತೋ ಯಾಮಿ ತತೋ ನ ಕಿಂಚಿತ್ ।</p>.<p>ವಿಚಾರ್ಯ ಪಶ್ಯಾಮಿ ಜಗನ್ನ ಕಿಂಚಿತ್</p>.<p>ಸ್ವಾತ್ಮಾವಬೋಧಾವಧಿಕಂ ನ ಕಿಂಚಿತ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಇತ್ತ ಏನೂ ಇಲ್ಲ, ಅತ್ತಲೂ ಏನು ಇಲ್ಲ. ಎಲ್ಲೆಲ್ಲಿ ಹೋಗುವೆನೋ ಅಲ್ಲಲ್ಲೂ ಏನೂ ಇಲ್ಲ. ಚೆನ್ನಾಗಿ ಆಲೋಚಿಸಿ ನೋಡಿದರೂ ಈ ಜಗತ್ತಿನಲ್ಲಿ ಸ್ವಾರಸ್ಯ ಇಲ್ಲ ಎಂದು ತಿಳಿಯವುದು. ಆತ್ಮಜ್ಞಾನಕ್ಕಿಂತಲೂ ಹೆಚ್ಚಿನ ಇನ್ನೊಂದು ವಿವರ ಏನೂ ಇಲ್ಲ.’</p>.<p>ಮೋಕ್ಷದ ಹೆಚ್ಚುಗಾರಿಕೆಯನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ಪುರುಷಾರ್ಥಗಳಲ್ಲಿ ಶ್ರೇಷ್ಠವಾದುದೇ ಮೋಕ್ಷ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಮೋಕ್ಷ ಎಂದರೆ ಆತ್ಮಜ್ಞಾನ, ನಮ್ಮತನದ ಅರಿವು.</p>.<p>ನಾವು ಜೀವನದಲ್ಲಿ ಏನೇನನ್ನೋ ಬಯಸುತ್ತೇವೆ; ಯಾವ್ಯಾವುದೋ ವಸ್ತು ಮತ್ತು ಸಂಗತಿಗಳನ್ನು ಬಯಸುತ್ತೇವೆ, ಅವುಗಳನ್ನು ಪಡೆಯಲು ಎಷ್ಟೋ ಶ್ರಮ ಪಡುತ್ತೇವೆ; ಮಾಡಬಾರದ ಕೆಲಸಗಳನ್ನೂ ಮಾಡುತ್ತೇವೆ. ಹಣ, ಅಧಿಕಾರ, ರೂಪ, ಶಕ್ತಿ – ಇಂಥವನ್ನೇ ನಿಜವಾದ ಜೀವನ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಜವಾದ ತಿಳಿವಳಿಕೆಯಿಂದ ಜಗತ್ತಿನಲ್ಲಿರುವ ಸಾರ–ನಿಸ್ಸಾರಗಳ ಬಗ್ಗೆ ಯೋಚಿಸಿದರೆ ಆಗ ಸ್ಪಷ್ಟವಾಗುತ್ತದೆ – ಈ ಜಗತ್ತಿನಲ್ಲಿ ಸಾರವಾದುದು ಏನೂ ಇಲ್ಲ ಎಂಬುದು. ಇಂಥ ವೈರಾಗ್ಯವನ್ನು ಸಂಪಾದಿಸಿ, ಬಳಿಕ ನಮ್ಮತನದ ದಿಟವಾದ ಅರಿವನ್ನು ಸಂಪಾದಿಸುವುದೇ ಆತ್ಮಜ್ಞಾನ.</p>.<p>ಏನೆಲ್ಲ ತಿಳಿವಳಿಕೆ, ವಿದ್ಯೆಯನ್ನು ಪಡೆದರೂ ಪ್ರಯೋಜವಿಲ್ಲ, ಆತ್ಮಜ್ಞಾನವೇ ನಿಜವಾದ ತಿಳಿವಳಿಕೆ ಎಂಬುದನ್ನು ಈ ಸುಭಾಷಿತ ಹೀಗೆ ಹೇಳುತ್ತಿದೆ:</p>.<p>ಅಧೀತ್ಯ ಚತುರೋ ವೇದಾನ್ ವ್ಯಾಕೃತ್ಯಾಷ್ಟಾದಶಸ್ಮೃತೀಃ ।</p>.<p>ಅಹೋ ಶ್ರಮಸ್ಯ ವೈಫಲ್ಯಂ ಆತ್ಮಾಪಿ ಕಲಿತೋ ನ ಚೇತ್ ।।</p>.<p>ಅಂದರೆ ’ನಾಲ್ಕು ವೇದಗಳನ್ನು ಪಠಿಸಿಯೂ ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ, ಆತ್ಮಜ್ಞಾನವನ್ನು ಸಂಪಾದಿಸದಿದ್ದರೆ ಅಷ್ಟು ಶ್ರಮವೂ ವ್ಯರ್ಥವೇ ಹೌದು.’</p>.<p>ಇಂಥ ಅರಿವನ್ನು ಪಡೆಯಲು ಏನು ಮಾಡಬೇಕು ಎಂದರೆ ಅದಕ್ಕೆ ಉತ್ತರವಾಗಿ ಈ ಸುಭಾಷಿತ ಹೇಳುತ್ತಿದೆ:</p>.<p>ತತ್ತ್ವಂ ಚಿಂತಯ ಸತತಂ ಚಿತ್ತೇ</p>.<p>ಪರಿಹರ ಚಿಂತಾಂ ನಶ್ವರವಿತ್ತೇ ।</p>.<p>ಕ್ಷಣಮಿಹ ಸಜ್ಜನಸಂಗತಿರೇಕಾ</p>.<p>ಭವತಿ ಭವಾರ್ಣವತರಣೇ ನೌಕಾ ।।</p>.<p>ಅಂದರೆ ‘ಮನಸ್ಸಿನಲ್ಲಿ ಸದಾ ತತ್ತ್ವಚಿಂತನೆಯನ್ನು ಮಾಡು; ನಶ್ವರವಾದ ಸಂಪತ್ತಿನ ಚಿಂತೆಯನ್ನು ಬಿಡು; ಸಜ್ಜನರೊಂದಿಗೆ ಒದಗಿದ ಕ್ಷಣಕಾಲದಷ್ಟು ಸಾಮೀಪ್ಯ ಕೂಡ ಸಂಸಾರ ಎಂಬ ಸಾಗರವನ್ನು ದಾಟಿಸಬಲ್ಲ ನೌಕೆಯಾಗಬಹುದು‘.</p>.<p>ಜೀವನದಲ್ಲಿ ಯಾವುದು ಶಾಶ್ವತ, ಯಾವುದು ನಶ್ವರ ಎಂಬ ಅರಿವನ್ನು ಪಡೆಯವುದೇ ಆತ್ಮಜ್ಞಾನಕ್ಕೆ ಒದಗುವ ದಿಟವಾದ ಸಾಧನ. ಅದನ್ನು ಪಡೆಯಲು ನಾವು ಒಳಿತಿನ ಜೊತೆಗೆ ಸದಾ ಇರಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತೋ ನ ಕಿಂಚಿತ್ಪರತೋ ನ ಕಿಂಚಿತ್</p>.<p>ಯತೋ ಯತೋ ಯಾಮಿ ತತೋ ನ ಕಿಂಚಿತ್ ।</p>.<p>ವಿಚಾರ್ಯ ಪಶ್ಯಾಮಿ ಜಗನ್ನ ಕಿಂಚಿತ್</p>.<p>ಸ್ವಾತ್ಮಾವಬೋಧಾವಧಿಕಂ ನ ಕಿಂಚಿತ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಇತ್ತ ಏನೂ ಇಲ್ಲ, ಅತ್ತಲೂ ಏನು ಇಲ್ಲ. ಎಲ್ಲೆಲ್ಲಿ ಹೋಗುವೆನೋ ಅಲ್ಲಲ್ಲೂ ಏನೂ ಇಲ್ಲ. ಚೆನ್ನಾಗಿ ಆಲೋಚಿಸಿ ನೋಡಿದರೂ ಈ ಜಗತ್ತಿನಲ್ಲಿ ಸ್ವಾರಸ್ಯ ಇಲ್ಲ ಎಂದು ತಿಳಿಯವುದು. ಆತ್ಮಜ್ಞಾನಕ್ಕಿಂತಲೂ ಹೆಚ್ಚಿನ ಇನ್ನೊಂದು ವಿವರ ಏನೂ ಇಲ್ಲ.’</p>.<p>ಮೋಕ್ಷದ ಹೆಚ್ಚುಗಾರಿಕೆಯನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ಪುರುಷಾರ್ಥಗಳಲ್ಲಿ ಶ್ರೇಷ್ಠವಾದುದೇ ಮೋಕ್ಷ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಮೋಕ್ಷ ಎಂದರೆ ಆತ್ಮಜ್ಞಾನ, ನಮ್ಮತನದ ಅರಿವು.</p>.<p>ನಾವು ಜೀವನದಲ್ಲಿ ಏನೇನನ್ನೋ ಬಯಸುತ್ತೇವೆ; ಯಾವ್ಯಾವುದೋ ವಸ್ತು ಮತ್ತು ಸಂಗತಿಗಳನ್ನು ಬಯಸುತ್ತೇವೆ, ಅವುಗಳನ್ನು ಪಡೆಯಲು ಎಷ್ಟೋ ಶ್ರಮ ಪಡುತ್ತೇವೆ; ಮಾಡಬಾರದ ಕೆಲಸಗಳನ್ನೂ ಮಾಡುತ್ತೇವೆ. ಹಣ, ಅಧಿಕಾರ, ರೂಪ, ಶಕ್ತಿ – ಇಂಥವನ್ನೇ ನಿಜವಾದ ಜೀವನ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಜವಾದ ತಿಳಿವಳಿಕೆಯಿಂದ ಜಗತ್ತಿನಲ್ಲಿರುವ ಸಾರ–ನಿಸ್ಸಾರಗಳ ಬಗ್ಗೆ ಯೋಚಿಸಿದರೆ ಆಗ ಸ್ಪಷ್ಟವಾಗುತ್ತದೆ – ಈ ಜಗತ್ತಿನಲ್ಲಿ ಸಾರವಾದುದು ಏನೂ ಇಲ್ಲ ಎಂಬುದು. ಇಂಥ ವೈರಾಗ್ಯವನ್ನು ಸಂಪಾದಿಸಿ, ಬಳಿಕ ನಮ್ಮತನದ ದಿಟವಾದ ಅರಿವನ್ನು ಸಂಪಾದಿಸುವುದೇ ಆತ್ಮಜ್ಞಾನ.</p>.<p>ಏನೆಲ್ಲ ತಿಳಿವಳಿಕೆ, ವಿದ್ಯೆಯನ್ನು ಪಡೆದರೂ ಪ್ರಯೋಜವಿಲ್ಲ, ಆತ್ಮಜ್ಞಾನವೇ ನಿಜವಾದ ತಿಳಿವಳಿಕೆ ಎಂಬುದನ್ನು ಈ ಸುಭಾಷಿತ ಹೀಗೆ ಹೇಳುತ್ತಿದೆ:</p>.<p>ಅಧೀತ್ಯ ಚತುರೋ ವೇದಾನ್ ವ್ಯಾಕೃತ್ಯಾಷ್ಟಾದಶಸ್ಮೃತೀಃ ।</p>.<p>ಅಹೋ ಶ್ರಮಸ್ಯ ವೈಫಲ್ಯಂ ಆತ್ಮಾಪಿ ಕಲಿತೋ ನ ಚೇತ್ ।।</p>.<p>ಅಂದರೆ ’ನಾಲ್ಕು ವೇದಗಳನ್ನು ಪಠಿಸಿಯೂ ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ, ಆತ್ಮಜ್ಞಾನವನ್ನು ಸಂಪಾದಿಸದಿದ್ದರೆ ಅಷ್ಟು ಶ್ರಮವೂ ವ್ಯರ್ಥವೇ ಹೌದು.’</p>.<p>ಇಂಥ ಅರಿವನ್ನು ಪಡೆಯಲು ಏನು ಮಾಡಬೇಕು ಎಂದರೆ ಅದಕ್ಕೆ ಉತ್ತರವಾಗಿ ಈ ಸುಭಾಷಿತ ಹೇಳುತ್ತಿದೆ:</p>.<p>ತತ್ತ್ವಂ ಚಿಂತಯ ಸತತಂ ಚಿತ್ತೇ</p>.<p>ಪರಿಹರ ಚಿಂತಾಂ ನಶ್ವರವಿತ್ತೇ ।</p>.<p>ಕ್ಷಣಮಿಹ ಸಜ್ಜನಸಂಗತಿರೇಕಾ</p>.<p>ಭವತಿ ಭವಾರ್ಣವತರಣೇ ನೌಕಾ ।।</p>.<p>ಅಂದರೆ ‘ಮನಸ್ಸಿನಲ್ಲಿ ಸದಾ ತತ್ತ್ವಚಿಂತನೆಯನ್ನು ಮಾಡು; ನಶ್ವರವಾದ ಸಂಪತ್ತಿನ ಚಿಂತೆಯನ್ನು ಬಿಡು; ಸಜ್ಜನರೊಂದಿಗೆ ಒದಗಿದ ಕ್ಷಣಕಾಲದಷ್ಟು ಸಾಮೀಪ್ಯ ಕೂಡ ಸಂಸಾರ ಎಂಬ ಸಾಗರವನ್ನು ದಾಟಿಸಬಲ್ಲ ನೌಕೆಯಾಗಬಹುದು‘.</p>.<p>ಜೀವನದಲ್ಲಿ ಯಾವುದು ಶಾಶ್ವತ, ಯಾವುದು ನಶ್ವರ ಎಂಬ ಅರಿವನ್ನು ಪಡೆಯವುದೇ ಆತ್ಮಜ್ಞಾನಕ್ಕೆ ಒದಗುವ ದಿಟವಾದ ಸಾಧನ. ಅದನ್ನು ಪಡೆಯಲು ನಾವು ಒಳಿತಿನ ಜೊತೆಗೆ ಸದಾ ಇರಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>