ಮಠದಲ್ಲೇ ಸ್ವಾಮೀಜಿ ಚಾತುರ್ಮಾಸ್ಯ ಆಚರಿಸಲಿದ್ದು, ಯಾವುದೇ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿಲ್ಲ. ಈ ಅವಧಿಯಲ್ಲಿ ಸಂಪ್ರದಾಯದಂತೆ ದೇವರ ಪೂಜೆ, ವ್ಯಾಸಪೂಜೆಮುಂತಾದ ವಾಡಿಕೆಯ ಕಾರ್ಯಕ್ರಮಗಳು ಇರಲಿವೆ.ಮಹಾರಾಷ್ಟ್ರ, ಕೇರಳ, ಗೋವಾ ಮತ್ತು ಬೆಂಗಳೂರಿನ ಭಕ್ತರು ಮಠಕ್ಕೆ ಸದ್ಯಕ್ಕೆ ಬರುವುದೇ ಬೇಡ ಎಂದುತಿಳಿಸಲಾಗಿದೆ.ಚಾತುರ್ಮಾಸ್ಯದ ಕಾರ್ಯಕ್ರಮಗಳನ್ನು ಮಠದ ಫೇಸ್ಬುಕ್ ಪುಟದಲ್ಲಿ ಲೈವ್ ಕೊಡಲಾಗುತ್ತದೆ.