<p>ಆ ರಾತ್ರಿ ಬೆಳದಿಂಗಳಲ್ಲದಿದ್ದರೂ, ಆಕಾಶವೇ ಒಂದು ದಿವ್ಯ ವೇದಿಕೆಯಂತೆ ಕಂಗೊಳಿಸುತ್ತಿತ್ತು. ನಕ್ಷತ್ರಗಳ ಹರಿವಿನ ಹಾಲುಹಾದಿ ಇಸ್ರೇಲಿನ ಮರಳು ದಿಬ್ಬಗಳ ಮೇಲೆ, ಕಣಿವೆಗಳಲ್ಲಿ ಹರಡಿದ್ದ ಹಳ್ಳಿಗಾಡಿನ ಮೇಲೆ ಬೆಳ್ಳಿಯ ಕಿರಣಗಳನ್ನು ಸೂಸಿತ್ತು. ಸಾಮಾನ್ಯ ದಿನಗಳಲ್ಲಿ ಅತಿಥಿಗಳನ್ನೇ ಕಾಣದ ಬೆತ್ಲೆಹೆಂ ಎಂಬ ಕುಗ್ರಾಮ — ಆ ದಿನ ಮಾತ್ರ ಜೀವಂತ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಜನಗಣತಿಯ ನೆಪದಲ್ಲಿ ಎಲ್ಲರೂ ತಂತಮ್ಮ ಪೂರ್ವಜರ ನೆಲೆಗೆ ಮರಳಿದ್ದರಿಂದ, ದಾರಿಯಿಕ್ಕೆಲವೂ ಹಳೆಯ ಮುಖಗಳ ಮಿಲನ, ನಗು, ಸಂಭ್ರಮ, ಹಬ್ಬದ ಗದ್ದಲ. ಎಷ್ಟೋ ವರ್ಷಗಳ ನಂತರ ಹುಟ್ಟೂರಿಗೆ ಬಂದಿದ್ದರಿಂದ ಎಲ್ಲರೂ ಮುದಗೊಂಡಿದ್ದರು.</p>.<p>ಈ ನಡುವೆ, ತಾವು ಬದುಕು ಕಟ್ಟಿಕೊಂಡಿದ್ದ ತೊಂಬತ್ತು ಕಿಲೋಮೀಟರ್ ದೂರದ ‘ನಜರೆತ್’ ಎಂಬ ಪಟ್ಟಣದಿಂದ ಬಂದು ದಣಿದಿದ್ದ ತುಂಬುಗರ್ಭಿಣಿ ಮರಿಯಾ ಮತ್ತು ಜೋಸೆಫ್ — ಕತ್ತೆಯ ಮೇಲೆ ನಡೆಸಿದ ಕಷ್ಟಯಾತ್ರೆಯ ನಂತರ — ಛತ್ರದ ಬಾಗಿಲು ತಟ್ಟಿದರು. ತುಂಬು ಗರ್ಭಿಣಿಯಾದ ಮರಿಯಳ ಸ್ಥಿತಿ ಎಲ್ಲರ ಕಣ್ಣಿಗೂ ಕಾಣುತ್ತಿತ್ತು. ಆದರೂ ಕೊಠಡಿಗಳೆಲ್ಲ ತುಂಬಿದ್ದವು. ಛತ್ರದ ಮಾಲಿಕನಿಗೋ ಇದ್ದ ಅತಿಥಿಗಳನ್ನು ನೋಡಿಕೊಳ್ಳುವುದೇ ಸಾಕುಸಾಕಾಗಿತ್ತು. ಪವಿತ್ರ ಬೈಬಲ್ನಲ್ಲಿ ಹೇಳುವಂತೆ ‘ಛತ್ರದಲ್ಲಿ ಅವರಿಗೆ ಸ್ಥಳ ದೊರೆಯಲಿಲ್ಲ’.</p>.<p>ತಾಯಿಯ ಗರ್ಭದಲ್ಲಿರುವಾಗಲೇ ಯೇಸುವು ‘ಸತ್ರದಲ್ಲಿ ನೇಮದಿಂದಿರಲಿಕೆಡೆಯುಂಟು’ ಎಂಬ ನೆಲದ ನಿಯಮಕ್ಕೆ ತಲೆಬಾಗಿದ. ಆ ದಂಪತಿಗೆ ಆ ರಾತ್ರಿ ದೊರೆತ ಏಕೈಕ ಆಶ್ರಯ — ದನದಕೊಟ್ಟಿಗೆ.</p>.<p>ಮಧ್ಯರಾತ್ರಿ ನಿಶ್ಶಬ್ದದಲ್ಲಿ ಜಗತ್ತನ್ನೇ ಬದಲಿಸುವ ಕ್ಷಣ ಜನಿಸಿತು — ಶಕಪುರುಷ ಯೇಸು ಜನಿಸಿದ. ಹಸುಕರುಗಳ ನಡುವೆ ಚಿಗುರು ಹುಲ್ಲಿನ ಮೃದುವಾದ ಮೆತ್ತೆಯ ಗೋದಲಿಯಲ್ಲಿ ಯೇಸು ಪವಡಿಸಿದಾಗ ಮೋಹನರಾಗ ಮಾತ್ರವಲ್ಲ, ಸ್ವರ್ಗಕಿನ್ನರರ ದಿವ್ಯಗಾನವೇ ಆ ಕೊಟ್ಟಿಗೆಯ ಸುತ್ತ ಹರಡಿತು. ಆಕಾಶದಲ್ಲಿ ತೇಜಸ್ವಿಯಾದ ನಕ್ಷತ್ರವೊಂದು ಮಿನುಗಿ ಬುವಿಯತ್ತ ದಾರಿ ತೋರಿಸಿತು. ಔತಣಕೂಟಗಳಲ್ಲಿ ‘ಮಜಾ’ ಮಾಡುತ್ತಿದ್ದವರಿಗೆ ಹಸುಕಂದನ ಅಳುವಾಗಲೀ ದೇವಗಾನವಾಗಲೀ, ಏನೂ ಕೇಳಿಸಲಿಲ್ಲ; ಆದರೆ ಬಯಲಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಸೂರಿಲ್ಲದ ಕುರುಬರಿಗೆ ಮಾತ್ರ ಸುವಾಸಿತ ತಂಬೆಲರು ಕುಳಿರ್ಗಾಳಿಯ ಆಲಾಪದೊಂದಿಗೆ ಆ ದೇವಗಾನ ಕೇಳಿಸಿತು. ‘ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಬುವಿಯಲ್ಲಿ ಒಳ್ಳೆಯ ಮನಸ್ಸಿನವರಿಗೆ ಶಾಂತಿ’ ಎಂಬ ಘೋಷಣೆ ಮೈಮನಗಳನ್ನು ಪುಳಕಗೊಳಿಸಿತು.</p>.<p>ಅಷ್ಟೇ ಅಲ್ಲ; ದೂರದ ಪೂರ್ವದೇಶದಲ್ಲಿದ್ದ ಖಗೋಳಜ್ಞಾನಿಗಳೂ ಆ ಮಿನುಗುವ ನಕ್ಷತ್ರದ ಸಂದೇಶವನ್ನು ಓದಿ ಅರ್ಥೈಸಿ ನಿಬ್ಬೆರಗಾದರು. ಕೂಡಲೇ ಅವರು ಗಣಿತ ಲೆಕ್ಕಿಸಿ, ನಿಖರ ದಿಕ್ಕು ಹಿಡಿದು, ಜಗದೋದ್ಧಾರಕನನ್ನು ಗೌರವಿಸಲು ಪಯಣ ಹೊರಟರು. ಅವರ ಒಂಟೆಗಳು ಮರಳ ಮೇಲೆ ಹೆಜ್ಜೆ ಹಾಕುತ್ತ, ಒಂದು ಹೊಸ ಯುಗದ ಉದಯವನ್ನು ಸಾರುತ್ತಿದ್ದವು.</p>.<p>ಇಂದು ನಮ್ಮ ಮನೆಗಳಲ್ಲಿ ಕಟ್ಟುವ ಕೊಟ್ಟಿಗೆಗಳು — ಹಸು, ಕರು, ಕುರಿಮರಿ, ಗೋದಲಿಯ ಮೇಲೆ ಯೇಸು ಮಲಗಿರುವ ದೃಶ್ಯ — ಇವೆಲ್ಲವೂ ಸಾವಿರಾರು ವರ್ಷಗಳ ಹಿಂದಿನ ಆ ಅಮೃತರಾತ್ರಿಯ ಮರುನಿರ್ಮಾಣ. ಕುರುಬರ ಮೊಗದ ವಿಸ್ಮಯ, ಮರಿಯಳ ಸ್ನಿಗ್ದ ನಗು, ಜ್ಯೋತಿಷಿಗಳ ದೀರ್ಘಯಾನ — ಎಲ್ಲವೂ ಮನೆಯ ಜಗುಲಿಗಳಲ್ಲಿ ಪುನಃ ಜೀವಂತವಾಗುತ್ತವೆ. ನಾವು ಕಟ್ಟುವ ಕೊಟ್ಟಿಗೆಯಲ್ಲಿ ನವಿರಾಗಿ ನಿರ್ಮಿಸುವ ಪ್ರತಿ ದೃಶ್ಯವೂ ಆ ಪವಿತ್ರರಾತ್ರಿಯ ನೆನಪೇ ಆಗಿದೆ.</p>.<p>ಬೆತ್ಲೆಹೇಮಿನ ಆ ರಾತ್ರಿಯು ಒಂದು ಕಥನವಲ್ಲ — ಮನುಜಪ್ರೀತಿಯ ವಿಶ್ವಶಾಂತಿಯ ಹೊಂಬೆಳಕಿನ ಹುಟ್ಟು. ಮತ್ತು ಆ ಬೆಳಕು ವಿಶ್ವಮಾನವನ ರೂಪದಲ್ಲಿ ಇಂದಿಗೂ ಜಗತ್ತನ್ನು ಬೆಳಗಿಸುತ್ತಲೇ ಇದೆ. ವಿಶ್ವದ ಮಹಾಮಹಿಮರು ಮಹಾತ್ಮರು ಆ ಬೆಳಕಿನತ್ತಲೇ ಜಗತ್ತನ್ನು ಮುನ್ನಡೆಸುತ್ತಿದ್ದಾರೆ. ಕ್ರಿಸ್ತಜಯಂತಿಯ ಈ ಶುಭಸಂದರ್ಭದಲ್ಲಿ ಧರೆಯಲ್ಲಿ ಯುದ್ಧಗಳು ದ್ವೇಷಗಳು ಅಳಿದು ಶಾಂತಿ ನೆಲೆಸಲೆಂದು, ಸೂರಿಲ್ಲದವರಿಗೆ ಸೂರು ದೊರೆಯಲೆಂದು ಹಾರೈಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ ರಾತ್ರಿ ಬೆಳದಿಂಗಳಲ್ಲದಿದ್ದರೂ, ಆಕಾಶವೇ ಒಂದು ದಿವ್ಯ ವೇದಿಕೆಯಂತೆ ಕಂಗೊಳಿಸುತ್ತಿತ್ತು. ನಕ್ಷತ್ರಗಳ ಹರಿವಿನ ಹಾಲುಹಾದಿ ಇಸ್ರೇಲಿನ ಮರಳು ದಿಬ್ಬಗಳ ಮೇಲೆ, ಕಣಿವೆಗಳಲ್ಲಿ ಹರಡಿದ್ದ ಹಳ್ಳಿಗಾಡಿನ ಮೇಲೆ ಬೆಳ್ಳಿಯ ಕಿರಣಗಳನ್ನು ಸೂಸಿತ್ತು. ಸಾಮಾನ್ಯ ದಿನಗಳಲ್ಲಿ ಅತಿಥಿಗಳನ್ನೇ ಕಾಣದ ಬೆತ್ಲೆಹೆಂ ಎಂಬ ಕುಗ್ರಾಮ — ಆ ದಿನ ಮಾತ್ರ ಜೀವಂತ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಜನಗಣತಿಯ ನೆಪದಲ್ಲಿ ಎಲ್ಲರೂ ತಂತಮ್ಮ ಪೂರ್ವಜರ ನೆಲೆಗೆ ಮರಳಿದ್ದರಿಂದ, ದಾರಿಯಿಕ್ಕೆಲವೂ ಹಳೆಯ ಮುಖಗಳ ಮಿಲನ, ನಗು, ಸಂಭ್ರಮ, ಹಬ್ಬದ ಗದ್ದಲ. ಎಷ್ಟೋ ವರ್ಷಗಳ ನಂತರ ಹುಟ್ಟೂರಿಗೆ ಬಂದಿದ್ದರಿಂದ ಎಲ್ಲರೂ ಮುದಗೊಂಡಿದ್ದರು.</p>.<p>ಈ ನಡುವೆ, ತಾವು ಬದುಕು ಕಟ್ಟಿಕೊಂಡಿದ್ದ ತೊಂಬತ್ತು ಕಿಲೋಮೀಟರ್ ದೂರದ ‘ನಜರೆತ್’ ಎಂಬ ಪಟ್ಟಣದಿಂದ ಬಂದು ದಣಿದಿದ್ದ ತುಂಬುಗರ್ಭಿಣಿ ಮರಿಯಾ ಮತ್ತು ಜೋಸೆಫ್ — ಕತ್ತೆಯ ಮೇಲೆ ನಡೆಸಿದ ಕಷ್ಟಯಾತ್ರೆಯ ನಂತರ — ಛತ್ರದ ಬಾಗಿಲು ತಟ್ಟಿದರು. ತುಂಬು ಗರ್ಭಿಣಿಯಾದ ಮರಿಯಳ ಸ್ಥಿತಿ ಎಲ್ಲರ ಕಣ್ಣಿಗೂ ಕಾಣುತ್ತಿತ್ತು. ಆದರೂ ಕೊಠಡಿಗಳೆಲ್ಲ ತುಂಬಿದ್ದವು. ಛತ್ರದ ಮಾಲಿಕನಿಗೋ ಇದ್ದ ಅತಿಥಿಗಳನ್ನು ನೋಡಿಕೊಳ್ಳುವುದೇ ಸಾಕುಸಾಕಾಗಿತ್ತು. ಪವಿತ್ರ ಬೈಬಲ್ನಲ್ಲಿ ಹೇಳುವಂತೆ ‘ಛತ್ರದಲ್ಲಿ ಅವರಿಗೆ ಸ್ಥಳ ದೊರೆಯಲಿಲ್ಲ’.</p>.<p>ತಾಯಿಯ ಗರ್ಭದಲ್ಲಿರುವಾಗಲೇ ಯೇಸುವು ‘ಸತ್ರದಲ್ಲಿ ನೇಮದಿಂದಿರಲಿಕೆಡೆಯುಂಟು’ ಎಂಬ ನೆಲದ ನಿಯಮಕ್ಕೆ ತಲೆಬಾಗಿದ. ಆ ದಂಪತಿಗೆ ಆ ರಾತ್ರಿ ದೊರೆತ ಏಕೈಕ ಆಶ್ರಯ — ದನದಕೊಟ್ಟಿಗೆ.</p>.<p>ಮಧ್ಯರಾತ್ರಿ ನಿಶ್ಶಬ್ದದಲ್ಲಿ ಜಗತ್ತನ್ನೇ ಬದಲಿಸುವ ಕ್ಷಣ ಜನಿಸಿತು — ಶಕಪುರುಷ ಯೇಸು ಜನಿಸಿದ. ಹಸುಕರುಗಳ ನಡುವೆ ಚಿಗುರು ಹುಲ್ಲಿನ ಮೃದುವಾದ ಮೆತ್ತೆಯ ಗೋದಲಿಯಲ್ಲಿ ಯೇಸು ಪವಡಿಸಿದಾಗ ಮೋಹನರಾಗ ಮಾತ್ರವಲ್ಲ, ಸ್ವರ್ಗಕಿನ್ನರರ ದಿವ್ಯಗಾನವೇ ಆ ಕೊಟ್ಟಿಗೆಯ ಸುತ್ತ ಹರಡಿತು. ಆಕಾಶದಲ್ಲಿ ತೇಜಸ್ವಿಯಾದ ನಕ್ಷತ್ರವೊಂದು ಮಿನುಗಿ ಬುವಿಯತ್ತ ದಾರಿ ತೋರಿಸಿತು. ಔತಣಕೂಟಗಳಲ್ಲಿ ‘ಮಜಾ’ ಮಾಡುತ್ತಿದ್ದವರಿಗೆ ಹಸುಕಂದನ ಅಳುವಾಗಲೀ ದೇವಗಾನವಾಗಲೀ, ಏನೂ ಕೇಳಿಸಲಿಲ್ಲ; ಆದರೆ ಬಯಲಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಸೂರಿಲ್ಲದ ಕುರುಬರಿಗೆ ಮಾತ್ರ ಸುವಾಸಿತ ತಂಬೆಲರು ಕುಳಿರ್ಗಾಳಿಯ ಆಲಾಪದೊಂದಿಗೆ ಆ ದೇವಗಾನ ಕೇಳಿಸಿತು. ‘ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಬುವಿಯಲ್ಲಿ ಒಳ್ಳೆಯ ಮನಸ್ಸಿನವರಿಗೆ ಶಾಂತಿ’ ಎಂಬ ಘೋಷಣೆ ಮೈಮನಗಳನ್ನು ಪುಳಕಗೊಳಿಸಿತು.</p>.<p>ಅಷ್ಟೇ ಅಲ್ಲ; ದೂರದ ಪೂರ್ವದೇಶದಲ್ಲಿದ್ದ ಖಗೋಳಜ್ಞಾನಿಗಳೂ ಆ ಮಿನುಗುವ ನಕ್ಷತ್ರದ ಸಂದೇಶವನ್ನು ಓದಿ ಅರ್ಥೈಸಿ ನಿಬ್ಬೆರಗಾದರು. ಕೂಡಲೇ ಅವರು ಗಣಿತ ಲೆಕ್ಕಿಸಿ, ನಿಖರ ದಿಕ್ಕು ಹಿಡಿದು, ಜಗದೋದ್ಧಾರಕನನ್ನು ಗೌರವಿಸಲು ಪಯಣ ಹೊರಟರು. ಅವರ ಒಂಟೆಗಳು ಮರಳ ಮೇಲೆ ಹೆಜ್ಜೆ ಹಾಕುತ್ತ, ಒಂದು ಹೊಸ ಯುಗದ ಉದಯವನ್ನು ಸಾರುತ್ತಿದ್ದವು.</p>.<p>ಇಂದು ನಮ್ಮ ಮನೆಗಳಲ್ಲಿ ಕಟ್ಟುವ ಕೊಟ್ಟಿಗೆಗಳು — ಹಸು, ಕರು, ಕುರಿಮರಿ, ಗೋದಲಿಯ ಮೇಲೆ ಯೇಸು ಮಲಗಿರುವ ದೃಶ್ಯ — ಇವೆಲ್ಲವೂ ಸಾವಿರಾರು ವರ್ಷಗಳ ಹಿಂದಿನ ಆ ಅಮೃತರಾತ್ರಿಯ ಮರುನಿರ್ಮಾಣ. ಕುರುಬರ ಮೊಗದ ವಿಸ್ಮಯ, ಮರಿಯಳ ಸ್ನಿಗ್ದ ನಗು, ಜ್ಯೋತಿಷಿಗಳ ದೀರ್ಘಯಾನ — ಎಲ್ಲವೂ ಮನೆಯ ಜಗುಲಿಗಳಲ್ಲಿ ಪುನಃ ಜೀವಂತವಾಗುತ್ತವೆ. ನಾವು ಕಟ್ಟುವ ಕೊಟ್ಟಿಗೆಯಲ್ಲಿ ನವಿರಾಗಿ ನಿರ್ಮಿಸುವ ಪ್ರತಿ ದೃಶ್ಯವೂ ಆ ಪವಿತ್ರರಾತ್ರಿಯ ನೆನಪೇ ಆಗಿದೆ.</p>.<p>ಬೆತ್ಲೆಹೇಮಿನ ಆ ರಾತ್ರಿಯು ಒಂದು ಕಥನವಲ್ಲ — ಮನುಜಪ್ರೀತಿಯ ವಿಶ್ವಶಾಂತಿಯ ಹೊಂಬೆಳಕಿನ ಹುಟ್ಟು. ಮತ್ತು ಆ ಬೆಳಕು ವಿಶ್ವಮಾನವನ ರೂಪದಲ್ಲಿ ಇಂದಿಗೂ ಜಗತ್ತನ್ನು ಬೆಳಗಿಸುತ್ತಲೇ ಇದೆ. ವಿಶ್ವದ ಮಹಾಮಹಿಮರು ಮಹಾತ್ಮರು ಆ ಬೆಳಕಿನತ್ತಲೇ ಜಗತ್ತನ್ನು ಮುನ್ನಡೆಸುತ್ತಿದ್ದಾರೆ. ಕ್ರಿಸ್ತಜಯಂತಿಯ ಈ ಶುಭಸಂದರ್ಭದಲ್ಲಿ ಧರೆಯಲ್ಲಿ ಯುದ್ಧಗಳು ದ್ವೇಷಗಳು ಅಳಿದು ಶಾಂತಿ ನೆಲೆಸಲೆಂದು, ಸೂರಿಲ್ಲದವರಿಗೆ ಸೂರು ದೊರೆಯಲೆಂದು ಹಾರೈಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>