<p><strong>ಬೀದರ್</strong>: ಮುಕ್ತಿ ಪಡೆಯಬೇಕಾದ ಮಾನವನೂ ಗುರುಮುಖಿಯಾಗದೆ ಮನಮುಖಿಯಾಗಿ ಮರ್ಕಟನಂತೆ ಸಂಸಾರದಲ್ಲಿ ಸಂಚರಿಸುತ್ತಾನೆ. ಹುಳ ಹುಟ್ಟಿದಂತೆ ಹುಟ್ಟಿ ಸಾಯಲು ಇದೇನು ಸಾಮಾನ್ಯ ಶರೀರವೇ? ಇದು ಮುಕ್ತಿ ದ್ವಾರ, ಭಕ್ತಿಯ ಭವನ.<br />ಜೀವ ಜಗತ್ತಿನಲ್ಲಿ ಬಂದ ಬಳಿಕ ತನುವೆಂಬ ಗೃಹದಲ್ಲಿ ಸಂಗ್ರಹಿಸಬೇಕಾದ ಸಂಪತ್ತು ಬಾಹ್ಯ ಧನವನಿತೆಯರಲ್ಲ. ಅವು ಜಗಕಿಕ್ಕಿದ ವಿಧಿ. ಜ್ಞಾನ, ಧ್ಯಾನ, ದಯೆಗಳೇ ನಿನ್ನೊಡವೆ. ‘ಧನವಗಳಿಸಬೇಕಿಂಥಾದ್ದೊ ನರಜನರಿಗೆ ಕಾಣಿಸದಂಥಾದ್ದೊ’ ಎಂದು ಹಾಡಿದಂತೆ ದೈವಿ ಸಂಪತ್ತು ಗಳಿಸಿದರೆ ಅದು ಕದಿಯಲು ಬಾರದು.</p>.<p>ಧರ್ಮ ಮಾನವನ ಬೆನ್ನೆಲುಬು. ಬದುಕಲು, ಬದುಕಿ ಕುಲ ಕೀರ್ತಿ ಬದುಕಿಸಲು ಧರ್ಮವೇ ಪ್ರಾಣ. ಅಂತೆಯೇ ಬಸವಣ್ಣನವರು ‘ದಯವೇ ಧರ್ಮದ ಮೂಲ’ ಎಂದಿದ್ದಾರೆ. ಈಗ ದೇವರು, ಧರ್ಮದ ಹೆಸರಿನಲ್ಲಿ ಮತಿಹೀನ ಕೆಲಸಗಳೇ ಹೆಚ್ಚಾಗಿವೆ. ಹಿಂಸೆಯಲ್ಲಿ, ಪ್ರಾಣವಧೆಯಲ್ಲಿ ಪುಣ್ಯವುಂಟೆ?<br />ದಯೆಯು ಒಂದು ದೈವಿ ಸಂಪದ್ಗುಣವಾಗಿದೆ. ಅಸುರಿ ಗುಣಗಳಿಂದ ಅಸುರತ್ವ ಬರುವಂತೆ, ದೈವಿ ಗುಣಗಳಿಂದ ದೇವತ್ವ ಬರುವುದು. ಯಾರು ತನ್ನ ಮೇಲಾಗಲಿ, ಪರರ ಮೇಲಾಗಲಿ ದಯೆ ತೋರುವುದಿಲ್ಲವೋ ಅಂಥವರು ಮನುಷ್ಯ ಲೋಕದಲ್ಲಿ ಬಲಿ ತಿಂದು ಬದುಕುವ ಕಾಗೆಗಿಂತಲೂ ಹೇಯವೆಂದಿದ್ದಾರೆ. ಅಂಥವರ ಜೀವನ ನಿರರ್ಥಕ.</p>.<p>-<strong>ಶಿವಕುಮಾರ ಸ್ವಾಮೀಜಿ<br />ಸಿದ್ಧಾರೂಢ ಮಠ, ಬೀದರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮುಕ್ತಿ ಪಡೆಯಬೇಕಾದ ಮಾನವನೂ ಗುರುಮುಖಿಯಾಗದೆ ಮನಮುಖಿಯಾಗಿ ಮರ್ಕಟನಂತೆ ಸಂಸಾರದಲ್ಲಿ ಸಂಚರಿಸುತ್ತಾನೆ. ಹುಳ ಹುಟ್ಟಿದಂತೆ ಹುಟ್ಟಿ ಸಾಯಲು ಇದೇನು ಸಾಮಾನ್ಯ ಶರೀರವೇ? ಇದು ಮುಕ್ತಿ ದ್ವಾರ, ಭಕ್ತಿಯ ಭವನ.<br />ಜೀವ ಜಗತ್ತಿನಲ್ಲಿ ಬಂದ ಬಳಿಕ ತನುವೆಂಬ ಗೃಹದಲ್ಲಿ ಸಂಗ್ರಹಿಸಬೇಕಾದ ಸಂಪತ್ತು ಬಾಹ್ಯ ಧನವನಿತೆಯರಲ್ಲ. ಅವು ಜಗಕಿಕ್ಕಿದ ವಿಧಿ. ಜ್ಞಾನ, ಧ್ಯಾನ, ದಯೆಗಳೇ ನಿನ್ನೊಡವೆ. ‘ಧನವಗಳಿಸಬೇಕಿಂಥಾದ್ದೊ ನರಜನರಿಗೆ ಕಾಣಿಸದಂಥಾದ್ದೊ’ ಎಂದು ಹಾಡಿದಂತೆ ದೈವಿ ಸಂಪತ್ತು ಗಳಿಸಿದರೆ ಅದು ಕದಿಯಲು ಬಾರದು.</p>.<p>ಧರ್ಮ ಮಾನವನ ಬೆನ್ನೆಲುಬು. ಬದುಕಲು, ಬದುಕಿ ಕುಲ ಕೀರ್ತಿ ಬದುಕಿಸಲು ಧರ್ಮವೇ ಪ್ರಾಣ. ಅಂತೆಯೇ ಬಸವಣ್ಣನವರು ‘ದಯವೇ ಧರ್ಮದ ಮೂಲ’ ಎಂದಿದ್ದಾರೆ. ಈಗ ದೇವರು, ಧರ್ಮದ ಹೆಸರಿನಲ್ಲಿ ಮತಿಹೀನ ಕೆಲಸಗಳೇ ಹೆಚ್ಚಾಗಿವೆ. ಹಿಂಸೆಯಲ್ಲಿ, ಪ್ರಾಣವಧೆಯಲ್ಲಿ ಪುಣ್ಯವುಂಟೆ?<br />ದಯೆಯು ಒಂದು ದೈವಿ ಸಂಪದ್ಗುಣವಾಗಿದೆ. ಅಸುರಿ ಗುಣಗಳಿಂದ ಅಸುರತ್ವ ಬರುವಂತೆ, ದೈವಿ ಗುಣಗಳಿಂದ ದೇವತ್ವ ಬರುವುದು. ಯಾರು ತನ್ನ ಮೇಲಾಗಲಿ, ಪರರ ಮೇಲಾಗಲಿ ದಯೆ ತೋರುವುದಿಲ್ಲವೋ ಅಂಥವರು ಮನುಷ್ಯ ಲೋಕದಲ್ಲಿ ಬಲಿ ತಿಂದು ಬದುಕುವ ಕಾಗೆಗಿಂತಲೂ ಹೇಯವೆಂದಿದ್ದಾರೆ. ಅಂಥವರ ಜೀವನ ನಿರರ್ಥಕ.</p>.<p>-<strong>ಶಿವಕುಮಾರ ಸ್ವಾಮೀಜಿ<br />ಸಿದ್ಧಾರೂಢ ಮಠ, ಬೀದರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>