ಶಿವಮೊಗ್ಗ: ಸಾಗರ ತಾಲ್ಲೂಕು ಶರಾವತಿ ಹಿನ್ನೀರಿನಲ್ಲಿರುವ ಸಿಗಂಧೂರಿನ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಜ.14 ಮಂಗಳವಾರ ಮತ್ತು 15ರಂದು ನಡೆಯಲಿದೆ.
ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಜಾತ್ರಾ ಮಹೋತ್ಸವನಡೆಯುತ್ತದೆ. ಅಂದುಬೆಳಿಗ್ಗೆ 7ಕ್ಕೆಮೂಲಸ್ಥಾನವಾದ ಸೀಗೆಕಣಿವೆಯಿಂದ ಜ್ಯೋತಿ ಮೆರವಣಿಗೆ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಕುಂಭ, ಕಳಶ ಹೊತ್ತಸಾವಿರಾರು ಮಹಿಳೆಯರು ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸವರು.
ಸಿಗಂದೂರಿಗೆ ಬರುವ ಭಕ್ತರಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಅಂಬಾರಗೋಡ್ಲು–ಕಳಸವಳ್ಳಿ ಲಾಂಚ್ ವ್ಯವಸ್ಥೆ ಇದೆ. ರಸ್ತೆ ಮೂಲಕ ಬರುವವರಿಗೆ ಶಿವಮೊಗ್ಗದಿಂದ ಹೊಸನಗರ ಮುಖೇನ ಸಿಗಂದೂರು ತಲುಪಬಹುದು.
ಈ ಮಹೋತ್ಸವದಲ್ಲಿ ಆನಂದ ಗುರೂಜಿಪ್ರವಚನ ನೀಡುವರು.ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ಸಮಾರಂಭವಿರುತ್ತದೆ. ಧರ್ಮದರ್ಶಿ ಡಾ.ಎಸ್ ರಾಮಪ್ಪ, ಎಚ್.ಆರ್.ರವಿಕುಮಾರ್, ಪ್ರಧಾನ ಅರ್ಚಕ ಎಸ್.ಪಿ ಶೇಷಗಿರಿ ಭಟ್ ಉಪಸ್ಥಿತರಿರುವರು.