ಭಗವಂತನ ಆರಾಧನೆಯನ್ನು ನಾವು ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ತಿಳಿಸಿದ್ದಾರೆ. ಜಗತ್ತಿನ ಜನರು ಭಗವಂತನನ್ನು ಆರಾಧಿಸುತ್ತಾರೆ. ಆದರೆ, ಅವನ ಮೇಲೆ ಶ್ರದ್ಧೆ, ಭಕ್ತಿ, ನಂಬಿಕೆ ಹೊಂದಿರುವುದಿಲ್ಲ. ಭಗವಂತನನ್ನು ಅರಿಯುವ ಮಾರ್ಗವೇ ಜನರಿಗೆ ಗೊತ್ತಿಲ್ಲ. ನಂಬಿಕೆಯಿಂದ ಪ್ರಾರ್ಥಿಸಿದರೆ ಆ ದೇವರು ಒಲಿಯುವುದಿಲ್ಲವೇ? ನಂಬದೆ, ನೆಚ್ಚದೆ ಭಗವಂತನನ್ನು ಆರಾಧಿಸಿದರೆ, ಅದು ಅಹಂಕಾರವನ್ನು ಮನದಲ್ಲಿ ಇಟ್ಟುಕೊಂಡು ಆರಾಧಿಸಿದಂತೆ ಆಗುತ್ತದೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.