ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು

Last Updated 29 ಸೆಪ್ಟೆಂಬರ್ 2021, 6:25 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ

ಚಂದ್ರ ಕುಂದೆ, ಕುಂದುವುದಯ್ಯಾ

ಚಂದ್ರಂಗೆ ರಾಹು ಅಡ್ಡಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೆ, ಅಯ್ಯಾ?

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ

ಚಂದ್ರಮನಡ್ಡ ಬಂದನೆ, ಅಯ್ಯಾ?

ಆರಿಗಾರೂ ಇಲ್ಲ; ಕೆಟ್ಟವಂಗೆ ಕಳೆ ಇಲ್ಲ!

ಜಗದ ನಂಟ ನೀನೆ ಅಯ್ಯಾ, ಕೂಡಲಸಂಗಮದೇವಾ!

ಮಾನವನ ಸಂಬಂಧಗಳು ಶಾಶ್ವತವಲ್ಲ ಎನ್ನುವುದನ್ನು ಬಸವಣ್ಣನವರು ಚಂದ್ರ ಹಾಗೂ ಸಮುದ್ರದ ಉದಾಹರಣೆಯ ಮುಖಾಂತರ ಈ ವಚನದ ಮೂಲಕ ವಿವರಿಸಿದ್ದಾರೆ. ಆಕಾಶದಲ್ಲಿ ಚಂದ್ರಮನು ಬೆಳೆಯುತ್ತಾ ಹೋದಂತೆ ಸಮುದ್ರವು ಕೂಡ ಉಕ್ಕೇರುತ್ತದೆ. ಚಂದ್ರಮನು ಇಳಿಯುತ್ತಾ ಬಂದಂತೆ ಸಮುದ್ರವೂ ಇಳಿಯುತ್ತದೆ. ಚಂದ್ರಗ್ರಹಣವಾದ ಸಂದರ್ಭದಲ್ಲಿ ರಾಹು ಚಂದ್ರಮನನ್ನು ನುಂಗಿದಾಗ ಸಮುದ್ರ ಏರುವುದೂ ಇಲ್ಲ; ಇಳಿಯುವುದೂ ಇಲ್ಲ. ಸಮುದ್ರವನ್ನು ಅಗಸ್ತ್ಯ ಮುನಿಯು ಆಪೋಶನ ಮಾಡಿದಾಗ ಚಂದ್ರಮನು ಕೂಡ ಯಥಾಪ್ರಕಾರವಾಗಿ ಇದ್ದನು. ಕಷ್ಟಗಳು ಬಂದಾಗ ಯಾರಿಗೆ ಯಾರೂ ಆಗುವುದಿಲ್ಲ. ಅವರರವರ ಸಮಸ್ಯೆಗಳಿಗೆ ಅವರವರೆ ಪರಿಹಾರ ಕಂಡುಕೊಳ್ಳಬೇಕು. ಆರಿಗಾರೂ ಇಲ್ಲ; ಕೆಟ್ಟವಂಗೆ ಕಳೆ ಇಲ್ಲ! ಜಗದ ನಂಟ ನೀನೆ ಅಯ್ಯಾ. ಜಗದರಕ್ಷಕನೆ ಭಗವಂತನಿರುವಾಗ ಎಲ್ಲವನ್ನೂ ಅವನು ವೀಕ್ಷಿಸುತ್ತಿದ್ದಾನೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT