ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ‘ಸಾಧನಾ ಸಂಭ್ರಮ ಯಾತ್ರೆ’ ನಡೆಸಿದ್ದಾರೆ. ಹಾಗೆಯೇ ಅವರು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೂ ಪ್ರವಾಸ ಕೈಗೊಳ್ಳಬೇಕು.
ವಿಶ್ವವಿದ್ಯಾಲಯಗಳ ವಿವಿಧ ಅಧ್ಯಯನ ಪೀಠಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ? ಅವುಗಳಿಗೆ ಅನುದಾನ ಲಭಿಸುತ್ತಿದೆಯೇ? ಸರ್ಕಾರದಿಂದ ಬಂದ ಹಣ ಸದ್ಬಳಕೆಯಾಗುತ್ತಿದೆಯೇ? ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೇ? ಎಂಬುದನ್ನೂ ಮುಖ್ಯಮಂತ್ರಿ ಗಮನಿಸಬೇಕು.