<p><strong>ಜಮಖಂಡಿ</strong>: ತಾಲ್ಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಅವರ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. </p>.<p>ಆರತಿ ಶಿಂಗೆ ಮೃತಪಟ್ಟವರು. ಕೆ.ಡಿ.ಜಂಬಗಿ ಕ್ರಾಸ್ನಲ್ಲಿರುವ ಗ್ಯಾರೇಜ್ನಲ್ಲಿ ಸಿದ್ದು ಶಿಂಗೆ ಕೆಲಸ ಮಾಡುತ್ತಿದ್ದರು. ಅಲ್ಲಿ ಬೈಕ್ ತೊಳೆಯುತ್ತಿದ್ದಾಗ ಪೈಪ್ ನೀರು ವಿನೋದ ಶಿಂಗೆ ಎಂಬವರ ಮೈಮೇಲೆ ಬಿದ್ದಿತು. ಇದರಿಂದ ಆತ ಸಿಟ್ಟಿಗೆದ್ದು ಸಿದ್ದು ಶಿಂಗೆಯನ್ನು ಹೊಡೆದ ಎನ್ನಲಾಗಿದೆ.</p>.<p>ಮನೆಗೆ ಬಂದ ಸಿದ್ದು ಶಿಂಗೆ ತನ್ನ ತಂದೆ ರಮೇಶ ಸದಾಶಿವ ಶಿಂಗೆ ಮತ್ತು ತಾಯಿ ಆರತಿಗೆ ಈ ವಿಷಯವನ್ನು ಹೇಳಿದ. ಮೂವರೂ ವಿನೋದ ಶಿಂಗೆ ಮನೆಯ ಹೊರಗೆ ನಿಂತು ಈ ಬಗ್ಗೆ ಕೇಳಲು ಹೋದರು. ಎರಡೂ ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿ ವಿನೋದ ಹಾಗೂ ಆತನ ತಾಯಿ ಮಾಲಾ ಸಾಬು ಶಿಂಗೆ, ಪತ್ನಿ ಸ್ವಪ್ನಾ ಶಿಂಗೆ, ಸುಧಾರಾಣಿ ಕಾಂಬಳೆ ಒಟ್ಟು ನಾಲ್ವರು ಸೇರಿ ಆರತಿ ಶಿಂಗೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮಂಗಳವಾರ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಡಿವೈಎಸ್ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ತನಿಖೆಯನ್ನು ಕೈಗೊಂಡಿದ್ದು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ತಾಲ್ಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಅವರ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. </p>.<p>ಆರತಿ ಶಿಂಗೆ ಮೃತಪಟ್ಟವರು. ಕೆ.ಡಿ.ಜಂಬಗಿ ಕ್ರಾಸ್ನಲ್ಲಿರುವ ಗ್ಯಾರೇಜ್ನಲ್ಲಿ ಸಿದ್ದು ಶಿಂಗೆ ಕೆಲಸ ಮಾಡುತ್ತಿದ್ದರು. ಅಲ್ಲಿ ಬೈಕ್ ತೊಳೆಯುತ್ತಿದ್ದಾಗ ಪೈಪ್ ನೀರು ವಿನೋದ ಶಿಂಗೆ ಎಂಬವರ ಮೈಮೇಲೆ ಬಿದ್ದಿತು. ಇದರಿಂದ ಆತ ಸಿಟ್ಟಿಗೆದ್ದು ಸಿದ್ದು ಶಿಂಗೆಯನ್ನು ಹೊಡೆದ ಎನ್ನಲಾಗಿದೆ.</p>.<p>ಮನೆಗೆ ಬಂದ ಸಿದ್ದು ಶಿಂಗೆ ತನ್ನ ತಂದೆ ರಮೇಶ ಸದಾಶಿವ ಶಿಂಗೆ ಮತ್ತು ತಾಯಿ ಆರತಿಗೆ ಈ ವಿಷಯವನ್ನು ಹೇಳಿದ. ಮೂವರೂ ವಿನೋದ ಶಿಂಗೆ ಮನೆಯ ಹೊರಗೆ ನಿಂತು ಈ ಬಗ್ಗೆ ಕೇಳಲು ಹೋದರು. ಎರಡೂ ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿ ವಿನೋದ ಹಾಗೂ ಆತನ ತಾಯಿ ಮಾಲಾ ಸಾಬು ಶಿಂಗೆ, ಪತ್ನಿ ಸ್ವಪ್ನಾ ಶಿಂಗೆ, ಸುಧಾರಾಣಿ ಕಾಂಬಳೆ ಒಟ್ಟು ನಾಲ್ವರು ಸೇರಿ ಆರತಿ ಶಿಂಗೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮಂಗಳವಾರ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಡಿವೈಎಸ್ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ತನಿಖೆಯನ್ನು ಕೈಗೊಂಡಿದ್ದು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>