ಕನ್ನಡ ಸಾಹಿತ್ಯ ಪರಿಷತ್ ಇಳಕಲ್ ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ, ‘ಮಹಾಂತ ಶ್ರೀಗಳ ವೈಚಾರಿಕ ನಿಲುವು, ಬಸವ ತತ್ವದ ಅನುಷ್ಠಾನದ ವಿಷಯದಲ್ಲಿದ್ದ ನಿಷ್ಠುರತೆ, ವ್ಯಸನಮುಕ್ತ ಸಮಾಜಕ್ಕಾಗಿ ಇದ್ದ ಹಂಬಲ ಅವರನ್ನು ಸದಾ ಸ್ಮರಣೀಯರನ್ನಾಗಿವೆ. ಮಾತೃ ಹೃದಯಿ, ಸಂಪತ್ತಿನ ನಿರ್ಮೋಹಿ ಅವರಾಗಿದ್ದರು’ ಎಂದು ನೆನಪಿಸಿಕೊಂಡರು.
ಮುದಗಲ್ ಮಹಾಂತಶ್ರೀಗಳು ಹಾಗೂ ತಹಶೀಲ್ದಾರ್ ಸುಭಾಷ ಸಂಪಗಾವಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಖುರ್ಷಿದಾಬೇಗಂ ಗದ್ವಾಲ್, ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಸದಸ್ಯರಾದ ತೇಜಮ್ಮ ವದ್ದಿ, ಜಯಲಕ್ಷ್ಮಿ ಯಂಗಾಲಿ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಎಂ.ಜಿ. ಪಟ್ಟಣಶೆಟ್ಟರ್, ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ತಿಮ್ಮಣ್ಣ ಭೋಗಾಪೂರ, ಗುರಣ್ಣ ಮರಟದ, ಎಂ.ಎಸ್. ವಾಲಿ, ಎನ್.ಎಲ್. ಕನ್ನೂರ, ಶರಣಪ್ಪ ಅಕ್ಕಿ ಇದ್ದರು.