ವಕೀಲ ಶಿವಾನಂದ ಟವಳಿ ಮಾತನಾಡಿ, ‘ಮೊದಲು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಿದ್ದೇವೆ.ಅಕ್ಟೋಬರ್ 12ರಂದು ನಂತರ, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆ. ಅಕ್ಟೋಬರ್ 17 ರಂದು 224 ಶಾಸಕರಿಗೆ ಮನವಿ ನೀಡಲಾಗುತ್ತಿದೆ. ಅಕ್ಟೋಬರ್ 22 ರಂದು ಬೆಂಗಳೂರು ಬಂದ್ಗೂ ಕರೆ ನೀಡಲಾಗಿದೆ. ಮರುದಿನದಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಹೋರಾಟದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿದರು.