ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ: ಗುಂಡಿ ಮುಚ್ಚಿದ ಆಟೊ ಚಾಲಕರು

Published 1 ಡಿಸೆಂಬರ್ 2023, 14:31 IST
Last Updated 1 ಡಿಸೆಂಬರ್ 2023, 14:31 IST
ಅಕ್ಷರ ಗಾತ್ರ

ತೇರದಾಳ: ಇಲ್ಲಿನ ಬಸ್ ನಿಲ್ದಾಣ ಪ್ರವೇಶದಲ್ಲೆ ಪುರಸಭೆಯವರು ನೀರು ಸರಬರಾಜು ಪೈಪ್ ಅಳವಡಿಸಲು ಗುಂಡಿ ತೆಗದಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದನ್ನು ಗಮನಿಸಿದ  ಆಟೊ ಚಾಲಕರು ಅದನ್ನು ಮುಚ್ಚಿ, ಮಾನವೀಯತೆ ಮೆರೆದಿದ್ದಾರೆ.

ಕೆಲ ತಿಂಗಳ ಹಿಂದೆ ಬಸ್ ನಿಲ್ದಾಣದ ಮುಂದೆ  ನೀರು ಸರಬರಾಜು ಪೈಪ್ ಅಳವಡಿಸಲು ಗುಂಡಿ ತೋಡಿದ್ದರು. ಬಸ್‌ಗಳ ಸಂಚಾರದಿಂದ ಪೈಪ್ ತೆರೆದುಕೊಂಡು, ಒಡೆದು ರಸ್ತೆ ಮೇಲೆಲ್ಲ ನೀರು ಹರಿದಿದ್ದರಿಂದ ಪೈಪ್‌ಲೈನ್ ಮಾರ್ಗ ಬದಲಾಯಿಸಲಾಯಿತು. ಆದರೆ  ಗುಂಡಿ  ಮುಚ್ಚಿರಲಿಲ್ಲ.

ಇದರಿಂದ ಬೈಕ್ ಸವಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಇದನ್ನು ಗಮನಿಸಿದ ಇಲ್ಲಿನ ಆಟೊ ಚಾಲಕರಾದ ಶಬ್ಬೀರ ಸಿರಾಜ ಡಾಲಾಯತ್, ಸದ್ದಾಂ ಸಪ್ತಸಾಗರ, ಅಲ್ಲಾಭಕ್ಷ ಇಬ್ರಾಹಿಂ ಕೊರಬು ಸೇರಿದಂತೆ ಅನೇಕರು ಗುಂಡಿಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT