ಮುಧೋಳ ತಾಲ್ಲೂಕಿನ ಸಮೀರವಾಡಿಯ ಗೋದಾವರಿ ಶುಗರ್ಸ್ ಮೇ 31ರವರೆಗೆ ₹115.36 ಕೋಟಿ ಬಾಕಿ ಉಳಿಸಿಕೊಂಡಿತ್ತು. ಸರ್ಕಾರದ ಗಡುವು ಮುಗಿಯುವ ವೇಳೆಗೆ ಆ ಪ್ರಮಾಣ ₹32 ಕೋಟಿಗೆ ಇಳಿದಿತ್ತು. ಜಿಲ್ಲಾಡಳಿತ ಸಕ್ಕರೆ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಉಳಿದ ಬಾಕಿಯನ್ನು ಪಾವತಿಸಿರುವ ಕಾರ್ಖಾನೆ ಆಡಳಿತ, ಬುಧವಾರ ಜಿಲ್ಲಾಡಳಿತಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.