<p><strong>ಬಾಗಲಕೋಟೆ</strong>: ಶಿವಾಜಿ ಜಯಂತಿ ಹಿನ್ನಲೆಯಲ್ಲಿ ಶಿವಾಜಿ ಜಯಂತಿ ಸಮಿತಿಯಿಂದ ಗುರುವಾರ ನಡೆದಿದ್ದ ಬೃಹತ್ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಲಾಗಿದೆ</p><p>ಮೆರವಣಿಗೆ ಪಂಕಾ ಮಸೀದಿ ಮಾರ್ಗವಾಗಿ ಹೋಗುವಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.</p><p>ಈ ವೇಳೆ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ತಲೆಗೆ ಗಾಯವಾಗಿದೆ ಎನ್ನಲಾಗಿದೆ.</p><p>ಗೋಯಲ್ ಅವರ ಶರ್ಟ್ ಮೇಲೆ ರಕ್ತದ ಕಲೆಯಾಗಿದೆ. ತಲೆ ಪೂರ್ತಿ ಕವರ್ ಆಗಿರುವಂತಹ ಹೆಲ್ಮೆಟ್ ಧರಿಸಿದ ಅವರು, ಕೂಡಲೇ ಅಲ್ಲದ ವಾಹನದಲ್ಲಿ ತೆರಳಿದ್ದಾರೆ.</p><p>ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೆರವಣಿಗೆ ನಡೆದಿದ್ದರೂ ಕಲ್ಲು ತೂರಾಟ ನಡೆದಿದೆ.</p><p> ಶಿವಾಜಿ ಸಮಿತಿ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಸೇರಿದ್ದರು. ಯುವಕರು ವಾಗ್ವಾದಕ್ಕೆ ಇಳಿದಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.</p><p>ಯುವಕರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ</p>.<div><blockquote>ಕಲ್ಲು ತೂರಾಟದಲ್ಲಿ ತಮಗೆ ಯಾವುದೇ ತೊಂದರೆ ಆಗಿಲ್ಲ. ಸಣ್ಣದಾಗಿ ತರಚಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಸಹಜ ಪರಿಸ್ಥಿತಿ ಇದೆ</blockquote><span class="attribution">ಎಸ್ಪಿ ಸಿದ್ಧಾರ್ಥ ಗೋಯಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಶಿವಾಜಿ ಜಯಂತಿ ಹಿನ್ನಲೆಯಲ್ಲಿ ಶಿವಾಜಿ ಜಯಂತಿ ಸಮಿತಿಯಿಂದ ಗುರುವಾರ ನಡೆದಿದ್ದ ಬೃಹತ್ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಲಾಗಿದೆ</p><p>ಮೆರವಣಿಗೆ ಪಂಕಾ ಮಸೀದಿ ಮಾರ್ಗವಾಗಿ ಹೋಗುವಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.</p><p>ಈ ವೇಳೆ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ತಲೆಗೆ ಗಾಯವಾಗಿದೆ ಎನ್ನಲಾಗಿದೆ.</p><p>ಗೋಯಲ್ ಅವರ ಶರ್ಟ್ ಮೇಲೆ ರಕ್ತದ ಕಲೆಯಾಗಿದೆ. ತಲೆ ಪೂರ್ತಿ ಕವರ್ ಆಗಿರುವಂತಹ ಹೆಲ್ಮೆಟ್ ಧರಿಸಿದ ಅವರು, ಕೂಡಲೇ ಅಲ್ಲದ ವಾಹನದಲ್ಲಿ ತೆರಳಿದ್ದಾರೆ.</p><p>ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೆರವಣಿಗೆ ನಡೆದಿದ್ದರೂ ಕಲ್ಲು ತೂರಾಟ ನಡೆದಿದೆ.</p><p> ಶಿವಾಜಿ ಸಮಿತಿ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಸೇರಿದ್ದರು. ಯುವಕರು ವಾಗ್ವಾದಕ್ಕೆ ಇಳಿದಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.</p><p>ಯುವಕರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ</p>.<div><blockquote>ಕಲ್ಲು ತೂರಾಟದಲ್ಲಿ ತಮಗೆ ಯಾವುದೇ ತೊಂದರೆ ಆಗಿಲ್ಲ. ಸಣ್ಣದಾಗಿ ತರಚಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಸ್ಥಳದಲ್ಲಿ ಸಹಜ ಪರಿಸ್ಥಿತಿ ಇದೆ</blockquote><span class="attribution">ಎಸ್ಪಿ ಸಿದ್ಧಾರ್ಥ ಗೋಯಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>