<p><strong>ಬಾಗಲಕೋಟೆ:</strong> ‘ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯ. ಪತ್ರಕರ್ತನಾಗಲು ತಾಳ್ಮೆ, ಸಂಯಮ, ನಿರಂತರ ವಾಸ್ತವದ ಅಧ್ಯಯನ ಅಗತ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಲೋಕೇಶ ಎಸ್.ಕೆ ಹೇಳಿದರು.</p>.<p>ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಕೌಶಲ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.</p>.<p>‘ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪತ್ರಿಕೋದ್ಯಮದಲ್ಲಿ ಬರವಣಿಗೆಯಿಂದ ಗುರುತಿಸಿಕೊಳ್ಳಬಹುದು. ಯಾವುದೇ ವಿಷಯಗಳ ಕುರಿತು ಬರೆಯುವ ಮುನ್ನ ಅದರ ಪೂರ್ವಭಾವಿ ಅಧ್ಯಯನ ಅವಶ್ಯಕ. ಪೂರ್ವಾಗ್ರಹ ಪೀಡಿತರಾಗದೆ ವಾಸ್ತವಿಕ ಪರಿಸ್ಥಿತಿ ಅರ್ಥೈಸಿಕೊಂಡರೆ ಬರವಣಿಗೆ ಮೊನಚಾಗುತ್ತದೆ’ ಎಂದರು.</p>.<p>‘ಆಳವಾದ ಅಧ್ಯಯನ ಮಾಡುವ ಕಲೆ ರೂಢಿಸಿಕೊಳ್ಳಬೇಕು. ಸರಳ, ಸ್ಪಷ್ಟ ಮತ್ತು ನಿಖರತೆ ರೂಢಿಸಿಕೊಂಡರೆ ಒಳ್ಳೆಯ ಬರಹಗಾರರಾಗಬಹುದು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. ಓದಿಸಿಕೊಂಡು ಹೋಗುವ ರೀತಿ ಬರೆಯುವ ಶೈಲಿ ಬೆಳೆಸಿಕೊಳ್ಳಬೇಕು’ ಎಂದರು.</p>.<p>ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐ.ಬಿ.ಚಿಕ್ಕಮಠ, ಐಕ್ಯೂಎಸಿ ಘಟಕದ ಸಂಯೋಜಕ ಕರುಡಾ ರಾಠೋಡ, ಪ್ರಾಧ್ಯಾಪಕ ಎಂ.ಪಿ. ದೊಡವಾಡ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ‘ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯ. ಪತ್ರಕರ್ತನಾಗಲು ತಾಳ್ಮೆ, ಸಂಯಮ, ನಿರಂತರ ವಾಸ್ತವದ ಅಧ್ಯಯನ ಅಗತ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಲೋಕೇಶ ಎಸ್.ಕೆ ಹೇಳಿದರು.</p>.<p>ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಕೌಶಲ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.</p>.<p>‘ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪತ್ರಿಕೋದ್ಯಮದಲ್ಲಿ ಬರವಣಿಗೆಯಿಂದ ಗುರುತಿಸಿಕೊಳ್ಳಬಹುದು. ಯಾವುದೇ ವಿಷಯಗಳ ಕುರಿತು ಬರೆಯುವ ಮುನ್ನ ಅದರ ಪೂರ್ವಭಾವಿ ಅಧ್ಯಯನ ಅವಶ್ಯಕ. ಪೂರ್ವಾಗ್ರಹ ಪೀಡಿತರಾಗದೆ ವಾಸ್ತವಿಕ ಪರಿಸ್ಥಿತಿ ಅರ್ಥೈಸಿಕೊಂಡರೆ ಬರವಣಿಗೆ ಮೊನಚಾಗುತ್ತದೆ’ ಎಂದರು.</p>.<p>‘ಆಳವಾದ ಅಧ್ಯಯನ ಮಾಡುವ ಕಲೆ ರೂಢಿಸಿಕೊಳ್ಳಬೇಕು. ಸರಳ, ಸ್ಪಷ್ಟ ಮತ್ತು ನಿಖರತೆ ರೂಢಿಸಿಕೊಂಡರೆ ಒಳ್ಳೆಯ ಬರಹಗಾರರಾಗಬಹುದು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. ಓದಿಸಿಕೊಂಡು ಹೋಗುವ ರೀತಿ ಬರೆಯುವ ಶೈಲಿ ಬೆಳೆಸಿಕೊಳ್ಳಬೇಕು’ ಎಂದರು.</p>.<p>ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐ.ಬಿ.ಚಿಕ್ಕಮಠ, ಐಕ್ಯೂಎಸಿ ಘಟಕದ ಸಂಯೋಜಕ ಕರುಡಾ ರಾಠೋಡ, ಪ್ರಾಧ್ಯಾಪಕ ಎಂ.ಪಿ. ದೊಡವಾಡ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>