<p><strong>ಅಮೀನಗಡ:</strong> ಪ್ರತಿ ವರ್ಷ ಸಮೀಪದ ಸಿದ್ದನಕೊಳ್ಳದಲ್ಲಿ ನಡೆಯುವ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಡಮಾಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಬಹುಭಾಷಾ ನಟಿ , ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ರಂಗಭೂಮಿ ಹಿರಿಯ ಕಲಾವಿದೆ ಮಾಲತಿ ಸುಧೀರ್ ಅವರಿಗೆ ಪ್ರದಾನ ಮಾಡಲಾಯಿತು.</p>.<p>ಸಮೀಪದ ಸಿದ್ಧನಕೊಳ್ಳದಲ್ಲಿ ಗುರುವಾರ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಶ್ರೀಮಠದ ಧರ್ಮಾಧಿಕಾರಿ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಪ್ರಶಸ್ತಿಯು ₹ 50 ಸಾವಿರ ನಗದು ಹೊಂದಿದೆ.</p>.<p>ಸಿದ್ದಶ್ರೀ ರಾಜ್ಯ ಪ್ರಶಸ್ತಿ: ಹಿರಿಯ ರಂಗ ಕಲಾವಿದೆ ಮಾಲತಿ ಸುಧೀರ ಅವರಿಗೆ ಈ ಬಾರಿಯ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ₹ 25 ಸಾವಿರ ನಗದು ಹೊಂದಿದೆ.</p>.<p>ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಪ್ರಿಯಾ ಸವದಿ ಇದ್ದರು.</p>.<p>ಇಳಕಲ್ ಸೀರೆ ಉಡುಗೊರೆ: ಪ್ರಶಸ್ತಿ ಪುರಸ್ಕೃತರಾದ ಭಾರತಿ ವಿಷ್ಣುವರ್ಧನ್ ಹಾಗೂ ಮಾಲತಿ ಸುಧೀರ್ ಅವರಿಗೆ ಇಳಕಲ್ ಸೀರೆಯನ್ನು ಪ್ರಶಸ್ತಿಯೊಂದಿಗೆ ಉಡುಗೊರೆಯಾಗಿ ನೀಡಲಾಯಿತು</p>.<p><strong>ಕಲಾವಿದರ ಪೋಷಕ ಮಠ</strong> </p><p>ಸಿದ್ದಿ ಪುರುಷರ ಆಧ್ಯಾತ್ಮಿಕ ತಾಣವಾದ ಸಿದ್ದನಕೊಳ್ಳ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲಬೇಕು. ಕಲಾವಿದರ ಪೋಷಕ ಮಠವಾದ ಶ್ರೀ ಮಠದ ಕಾರ್ಯ ನಿರಂತರವಾಗಿರಲಿ. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಈ ಮಠದ ಪರಂಪರೆ ನಾಡಿನ ಹೆಮ್ಮೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.</p>.<div><blockquote>ಉತ್ತರ ಕರ್ನಾಟಕದ ಯುವ ಕಲಾವಿದರಿಗೆ ಸಿದ್ದನಕೊಳ್ಳದ ಶ್ರೀಮಠ ವೇದಿಕೆ ಕಲ್ಪಿಸಿ ಪೋಷಿಸುತ್ತಿರುವ ಕಾರ್ಯ ಶ್ಲಾಘನೀಯ </blockquote><span class="attribution">–ಮಾಲತಿ ಸುಧೀರ್, ಪ್ರಶಸ್ತಿ ಪುರಸ್ಕೃತೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮೀನಗಡ:</strong> ಪ್ರತಿ ವರ್ಷ ಸಮೀಪದ ಸಿದ್ದನಕೊಳ್ಳದಲ್ಲಿ ನಡೆಯುವ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಡಮಾಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಬಹುಭಾಷಾ ನಟಿ , ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ರಂಗಭೂಮಿ ಹಿರಿಯ ಕಲಾವಿದೆ ಮಾಲತಿ ಸುಧೀರ್ ಅವರಿಗೆ ಪ್ರದಾನ ಮಾಡಲಾಯಿತು.</p>.<p>ಸಮೀಪದ ಸಿದ್ಧನಕೊಳ್ಳದಲ್ಲಿ ಗುರುವಾರ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಶ್ರೀಮಠದ ಧರ್ಮಾಧಿಕಾರಿ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.</p>.<p>ಪ್ರಶಸ್ತಿಯು ₹ 50 ಸಾವಿರ ನಗದು ಹೊಂದಿದೆ.</p>.<p>ಸಿದ್ದಶ್ರೀ ರಾಜ್ಯ ಪ್ರಶಸ್ತಿ: ಹಿರಿಯ ರಂಗ ಕಲಾವಿದೆ ಮಾಲತಿ ಸುಧೀರ ಅವರಿಗೆ ಈ ಬಾರಿಯ ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ₹ 25 ಸಾವಿರ ನಗದು ಹೊಂದಿದೆ.</p>.<p>ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಪ್ರಿಯಾ ಸವದಿ ಇದ್ದರು.</p>.<p>ಇಳಕಲ್ ಸೀರೆ ಉಡುಗೊರೆ: ಪ್ರಶಸ್ತಿ ಪುರಸ್ಕೃತರಾದ ಭಾರತಿ ವಿಷ್ಣುವರ್ಧನ್ ಹಾಗೂ ಮಾಲತಿ ಸುಧೀರ್ ಅವರಿಗೆ ಇಳಕಲ್ ಸೀರೆಯನ್ನು ಪ್ರಶಸ್ತಿಯೊಂದಿಗೆ ಉಡುಗೊರೆಯಾಗಿ ನೀಡಲಾಯಿತು</p>.<p><strong>ಕಲಾವಿದರ ಪೋಷಕ ಮಠ</strong> </p><p>ಸಿದ್ದಿ ಪುರುಷರ ಆಧ್ಯಾತ್ಮಿಕ ತಾಣವಾದ ಸಿದ್ದನಕೊಳ್ಳ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲಬೇಕು. ಕಲಾವಿದರ ಪೋಷಕ ಮಠವಾದ ಶ್ರೀ ಮಠದ ಕಾರ್ಯ ನಿರಂತರವಾಗಿರಲಿ. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಈ ಮಠದ ಪರಂಪರೆ ನಾಡಿನ ಹೆಮ್ಮೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.</p>.<div><blockquote>ಉತ್ತರ ಕರ್ನಾಟಕದ ಯುವ ಕಲಾವಿದರಿಗೆ ಸಿದ್ದನಕೊಳ್ಳದ ಶ್ರೀಮಠ ವೇದಿಕೆ ಕಲ್ಪಿಸಿ ಪೋಷಿಸುತ್ತಿರುವ ಕಾರ್ಯ ಶ್ಲಾಘನೀಯ </blockquote><span class="attribution">–ಮಾಲತಿ ಸುಧೀರ್, ಪ್ರಶಸ್ತಿ ಪುರಸ್ಕೃತೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>