<p>ಬಾಗಲಕೋಟೆ: ದಾರಿಯಲ್ಲಿ ಕಳೆದುಕೊಂಡಿದ್ದ ಹಣವು ಪೊಲೀಸರು ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಿಂದ ಮರಳಿ ಕಳೆದುಕೊಂಡವರಿಗೆ ಸಿಕ್ಕಿದೆ.</p>.<p>ಕಾಳಿದಾಸ ವೖತ್ತದಲ್ಲಿರುವ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ₹15 ಸಾವಿರ ಹಣ ಪಡೆದ ರಂಗನಗೌಡ ದಂಡಣ್ಣವರ, ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಗೆ ಹಣ ತುಂಬಲು ಹೋಗಿದ್ದರು.</p>.<p>ಹಣ ತುಂಬಲು ನೋಡಿದಾಗ ಕಿಸೆಯಲ್ಲಿ ಹಣವಿರಲಿಲ್ಲ. ಕೂಡಲೇ ತಿರುಗಿ ಪ್ರಗತಿ ಸಂಘಕ್ಕೆ ಹೋಗಿ ವಿಚಾರಿಸಿದಾಗ ಅಟೆಂಡರ್ ಪುನೀತ್ ಘಾಟಗೆ ಹಾಗೂ ಪಕ್ಕದ ಅಂಗಡಿ ಕೆಲಸಗಾರರು ರಸ್ತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಣ ಆರಿಸಿಕೊಳ್ಳುತ್ತಿದ್ದರು. ಅವರದ್ದೆಂದು ನಾವೂ ಆರಿಸಿಕೊಟ್ಟೆವು. ಸ್ಕೂಟರ್ನಲ್ಲಿ ಹೋದರು ಎಂದು ತಿಳಿಸಿದರು.</p>.<p>ಪುನೀತ್ ಅವರನ್ನು ಕರೆದುಕೊಂಡು ನವನಗರ ಪೊಲೀಸ್ ಠಾಣೆಗೆ ಹೋಗಿ ತಿಳಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ರೆಕಾರ್ಡಿಂಗ್ ಪರಿಶೀಲಿಸಿದಾಗ ಹಣ ತೆಗೆದುಕೊಂಡು ಹೋಗಿದ್ದ ಸವಾರರ ದ್ವಿಚಕ್ರ ವಾಹನದ ನಂಬರ್ ದೊರೆಯಿತು. ದಾಖಲೆ ತೆಗೆದು ಅವರ ಮೊಬೈಲ್ಗೆ ಕರೆ ಮಾಡಿದಾಗ ಹಣವನ್ನು ಮರಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ದಾರಿಯಲ್ಲಿ ಕಳೆದುಕೊಂಡಿದ್ದ ಹಣವು ಪೊಲೀಸರು ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಿಂದ ಮರಳಿ ಕಳೆದುಕೊಂಡವರಿಗೆ ಸಿಕ್ಕಿದೆ.</p>.<p>ಕಾಳಿದಾಸ ವೖತ್ತದಲ್ಲಿರುವ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ₹15 ಸಾವಿರ ಹಣ ಪಡೆದ ರಂಗನಗೌಡ ದಂಡಣ್ಣವರ, ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಗೆ ಹಣ ತುಂಬಲು ಹೋಗಿದ್ದರು.</p>.<p>ಹಣ ತುಂಬಲು ನೋಡಿದಾಗ ಕಿಸೆಯಲ್ಲಿ ಹಣವಿರಲಿಲ್ಲ. ಕೂಡಲೇ ತಿರುಗಿ ಪ್ರಗತಿ ಸಂಘಕ್ಕೆ ಹೋಗಿ ವಿಚಾರಿಸಿದಾಗ ಅಟೆಂಡರ್ ಪುನೀತ್ ಘಾಟಗೆ ಹಾಗೂ ಪಕ್ಕದ ಅಂಗಡಿ ಕೆಲಸಗಾರರು ರಸ್ತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಣ ಆರಿಸಿಕೊಳ್ಳುತ್ತಿದ್ದರು. ಅವರದ್ದೆಂದು ನಾವೂ ಆರಿಸಿಕೊಟ್ಟೆವು. ಸ್ಕೂಟರ್ನಲ್ಲಿ ಹೋದರು ಎಂದು ತಿಳಿಸಿದರು.</p>.<p>ಪುನೀತ್ ಅವರನ್ನು ಕರೆದುಕೊಂಡು ನವನಗರ ಪೊಲೀಸ್ ಠಾಣೆಗೆ ಹೋಗಿ ತಿಳಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ರೆಕಾರ್ಡಿಂಗ್ ಪರಿಶೀಲಿಸಿದಾಗ ಹಣ ತೆಗೆದುಕೊಂಡು ಹೋಗಿದ್ದ ಸವಾರರ ದ್ವಿಚಕ್ರ ವಾಹನದ ನಂಬರ್ ದೊರೆಯಿತು. ದಾಖಲೆ ತೆಗೆದು ಅವರ ಮೊಬೈಲ್ಗೆ ಕರೆ ಮಾಡಿದಾಗ ಹಣವನ್ನು ಮರಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>