ಪಟ್ಟಣದ ವಿಜಯ ಮಹಾಂತೇಶ ಮಠದ ಆವರಣದಲ್ಲಿ ಮೇಗಲಪೇಟೆ ಹಾಗೂ ದರಗಾದ ಓಣಿಯ ಯುವಕರು ಕಬ್ಬಿಣದ ಸಲಾಕೆ, ಬಡಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಹೊಡೆದಾಟಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲವಾದರೂ, ಹಲವು ದಿನಗಳಿಂದ ಎರಡು ಓಣಿಯ ಯುವಕರ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ.