ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹2.74 ಲಕ್ಷ ನಗದು ಹಣವನ್ನು ಕುಳಗೇರಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಭಾನುವಾರ ಜಪ್ತಿ ಮಾಡಲಾಗಿದೆ.
ಬಾದಾಮಿ ಕ್ಷೇತ್ರ ವ್ಯಾಪ್ತಿಯ ಕುಳಗೇರಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ ರಾಮದುರ್ಗದಿಂದ ಕೆರೂರಗೆ ಹೊರಟ ಕಾರನ್ನು ಪರಿಶೀಲಿಸಿದಾಗ ಸಂಶಯಾತ್ಮಕವಾಗಿ ಕಂಡುಬಂದ ಹಣ ಜಪ್ತಿ ಮಾಡಲಾಗಿದೆ ಬಾದಾಮಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದುರುಗೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.