ಹಿರಿಯ ಅಧಿಕಾರಿಯೇತಮ್ಮನ್ನು ಎದುರುಗೊಳ್ಳಲು ಬಂದಿದ್ದು ಕಂಡು ಇಬ್ಬರೂ ಸಿಬ್ಬಂದಿ ಭಾವುಕರಾದರು. ಎಂದಿನ ಶೈಲಿಯಲ್ಲಿಯೇ ಸೆಲ್ಯೂಟ್ ಹೊಡೆದು ನಮಿಸಿದರು. ಅವರನ್ನು ಅಭಿನಂದಿಸಿ ಕುಶಲೋಪರಿ ನಡೆಸಿದ ರಾಘವೇಂದ್ರ ಸುಹಾಸ್, ಮುಂದೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಈ ವೇಳೆ ಅಲ್ಲಿ ನೆರೆದಿದ್ದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯಿಂದ ಚಪ್ಪಾಳೆಯ ಸದ್ದು ಅನುರಣಿಸಿತು.ಇಬ್ಬರಿಗೂ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್ ಪ್ರಮಾಣಪತ್ರ ವಿತರಿಸಿದರು.