ನೀಲಗುಂದ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ ಪಾನ್ಶಾಪ್ ನಡೆಸುತ್ತಿರುವ ಬಸವರಾಜ ಏಳೆಂಟು ವರ್ಷಗಳಿಂದ ಕನ್ಯಾನ್ವೇಷಣೆಯಲ್ಲಿದ್ದರು. ಗಣಿ ಗ್ರಾಮದ ರುಕ್ಮಿಣಿ ಸಂಗಾತಿಯಾಗಿ ಸಿಕ್ಕರು. ಸಮಾಜದ ಗುರು ಹಿರಿಯರ ಸಮ್ಮುಖದಲ್ಲಿ ಭಾನುವಾರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ವಧು–ವರರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು.