<p><strong>ಜಮಖಂಡಿ</strong> (ಬಾಗಲಕೋಟೆ ಜಿಲ್ಲೆ): ನಗರದ ಕುಂಬಾರ ಗಲ್ಲಿಯಲ್ಲಿ ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ ನಡೆಸುತ್ತಿದ್ದ ಆರೋಪಿ ಸುರೇಖಾ ಚರಕಿ (62) ಎಂಬುವರ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು ಆರೋಗ್ಯ ತಪಾಸಣಾ ಕೊಠಡಿಗೆ ಬೀಗ ಜಡಿದರು.</p>.<p>‘ಎಸ್ಎಸ್ಎಲ್ಸಿ ಓದಿರುವ ಸುರೇಖಾ ಚರಕಿ ನಕಲಿ ವೈದ್ಯೆಯಾಗಿದ್ದು, ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುವ ಖಚಿತ ಸುಳಿವಿನ ಆಧಾರದ ಮೇಲೆ ಡಾ.ಜಿ.ಎಸ್.ಗಲಗಲಿ, ಪಿಎಸ್ಐ ನಾಗರಾಜ ಖಿಲಾರಿ ಮತ್ತಿತರರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಿತು’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಗರ್ಭಪಾತ ಮಾಡುವ ಮಾತ್ರೆ, ಔಷಧಿ, ವಿಟಮಿನ್, ನಿದ್ರೆ ಮಾತ್ರೆ, ಸಲಾಯಿನ್, ಸ್ಟೆತಾಸ್ಕೋಪ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕೃಷ್ಣಾ ಮೆಡಿಕಲ್ ಮತ್ತು ವಿಜಯಪುರದಿಂದ ಔಷಧಿಗಳನ್ನು ತರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು’ ಎಂದರು.</p>.<p>‘ಸ್ಕ್ಯಾನಿಂಗ್ ಮಾಡಿಸಲು ಕಳುಹಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಮೊದಲು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಎಷ್ಟು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬುದು ದಾಖಲೆಪತ್ರಗಳಿಲ್ಲ. ಅವರ ಅಕ್ರಮ ಕಾರ್ಯಕ್ಕೆ ಸಹಕಾರ ನೀಡಿದವರನ್ನು ವಿಚಾರಣೆ ಮಾಡಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong> (ಬಾಗಲಕೋಟೆ ಜಿಲ್ಲೆ): ನಗರದ ಕುಂಬಾರ ಗಲ್ಲಿಯಲ್ಲಿ ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ ನಡೆಸುತ್ತಿದ್ದ ಆರೋಪಿ ಸುರೇಖಾ ಚರಕಿ (62) ಎಂಬುವರ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು ಆರೋಗ್ಯ ತಪಾಸಣಾ ಕೊಠಡಿಗೆ ಬೀಗ ಜಡಿದರು.</p>.<p>‘ಎಸ್ಎಸ್ಎಲ್ಸಿ ಓದಿರುವ ಸುರೇಖಾ ಚರಕಿ ನಕಲಿ ವೈದ್ಯೆಯಾಗಿದ್ದು, ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುವ ಖಚಿತ ಸುಳಿವಿನ ಆಧಾರದ ಮೇಲೆ ಡಾ.ಜಿ.ಎಸ್.ಗಲಗಲಿ, ಪಿಎಸ್ಐ ನಾಗರಾಜ ಖಿಲಾರಿ ಮತ್ತಿತರರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಿತು’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಗರ್ಭಪಾತ ಮಾಡುವ ಮಾತ್ರೆ, ಔಷಧಿ, ವಿಟಮಿನ್, ನಿದ್ರೆ ಮಾತ್ರೆ, ಸಲಾಯಿನ್, ಸ್ಟೆತಾಸ್ಕೋಪ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕೃಷ್ಣಾ ಮೆಡಿಕಲ್ ಮತ್ತು ವಿಜಯಪುರದಿಂದ ಔಷಧಿಗಳನ್ನು ತರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು’ ಎಂದರು.</p>.<p>‘ಸ್ಕ್ಯಾನಿಂಗ್ ಮಾಡಿಸಲು ಕಳುಹಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಮೊದಲು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಎಷ್ಟು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬುದು ದಾಖಲೆಪತ್ರಗಳಿಲ್ಲ. ಅವರ ಅಕ್ರಮ ಕಾರ್ಯಕ್ಕೆ ಸಹಕಾರ ನೀಡಿದವರನ್ನು ವಿಚಾರಣೆ ಮಾಡಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>