<p><strong>ಬಾಗಲಕೋಟೆ:</strong> ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾಕನೂರ ಎಸ್ಬಿಐ ಬ್ಯಾಂಕ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಇಬ್ಬರನ್ನು ಬಂಧಿಸಲಾಗಿದ್ದು, 30 ಗ್ರಾಂ ಬಂಗಾರ, 1.25 ಲಕ್ಷ ನಗದು, ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್, ಪ್ರಕರಣದಲ್ಲಿ ಆರೋಪಿಗಳು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ಆದರೂ, ಪೊಲೀಸರು ಸತತವಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.</p>.<p>ಮಹಾರಾಷ್ಟ್ರದ ನಯಗಾಂವದ ಅಕ್ಷಯ ಅಂಬೋರೆ, ಕುನಾಲ್ ಚವ್ಹಾಣ ಬಂಧಿಸಲಾಗಿದ್ದು, ಅವರಿಂದ ಕಳ್ಳತನಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್, ಸಿಲಿಂಡರ್, ಕಬ್ಬಿಣದ ರಾಡು ವಶಪಡಿಸಿಕೊಳ್ಳಲಾಗಿದೆ.</p>.<p>ತೆಲಂಗಾಣ ರಾಜ್ಯದ ರಾಯಪರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಎಸ್ಬಿಐ ಬ್ಯಾಂಕ್ ಕಳ್ಳತನವನ್ನೂ ಮಾಡಿದ್ದು ಪತ್ತೆಯಾಗಿದೆ. ಅಲ್ಲಿ ಕಳ್ಳತನವಾಗಿದ್ದ 244 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಮಾಡಲಾಗಿದೆ.</p>.<p>ಇದಕ್ಕೂ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಹಮ್ಮದ್ ನವಾಬ್, ಖಮರುಲ್ಲಾ ಖಾನ್ ಬಂಧಿಸಲಾಗಿದೆ.</p>.<p>ಘಟನೆ ವಿವರ: ಆರು ಜನರ ತಂಡವು ಕಳ್ಳತನ ಮಾಡುವ ಆರು ತಿಂಗಳು ಮೊದಲೇ ಕಾಕನೂರಿನ ಎಸ್ಬಿಐ ಬ್ಯಾಂಕ್ ವೀಕ್ಷಿಸಿ, ಹೇಗೆ ಕಳ್ಳತನ ಮಾಡಬಹುದು ಎಂದು ನೋಡಿಕೊಂಡು ಹೋಗಿದ್ದರು. </p>.<p>ಯೋಜನೆಯಂತೆ ಕಾರಿನಲ್ಲಿ ಬಂದಿದ್ದ ಆರೋಪಿಗಳು 200 ಮೀಟರ್ ದೂರದಲ್ಲಿಯೇ ರಾತ್ರಿ 10ರ ಸುಮಾರಿಗೆ ಕಾರಿನಿಂದ ಇಳಿದು, ಚಾಲಕನಿಗೆ ಬೆಳಗಿನ ಜಾವ ನಾಲ್ಕಕ್ಕೆ ಬರಲು ತಿಳಿಸಿದ್ದರು. 11ರ ಸುಮಾರಿಗೆ ಬ್ಯಾಂಕಿಗೆ ಬಂದ ಆರೋಪಿಗಳು, ಹಿಂಭಾಗದಲ್ಲಿದ್ದ ಶೆಟರ್ ಮುರಿಗು ಒಳಪ್ರವೇಶಿಸಿದ್ದರು.</p>.<p>ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣ ಬಳಿದು ರೆಕಾರ್ಡ್ ಆಗದಂತೆ ಮಾಡಿದ್ದರು. ನಂತರ ಬ್ಯಾಂಕಿನಲ್ಲಿದ್ದ ಮಿನಿ ಲಾಕರ್ವೊಂದನ್ನು ಒಡೆದಿದ್ದರು. ನಂತರ ಇನ್ನೊಂದು ದೊಡ್ಡ ಲಾಕರ್ ಒಡೆದು, ಅದರಲ್ಲಿದ್ದ ಬಂಗಾರ, ಬೇರೆಡೆ ಇದ್ದ ನಗದು ಒಟ್ಟು ₹44 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಸಮಯವಾಗಿದ್ದರಿಂದ ಇನ್ನೆರಡು ಲಾಕರ್ಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರು. ₹32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಫಿಂಗರ್ ಪ್ರಿಂಟ್, ವಾಹನದ ಚಲನವಲನ ಗೊತ್ತಾಗದ್ದರಿಂದ ಪ್ರಕರಣ ಕಗ್ಗಂಟಾಗಿತ್ತು. ಬೇರೆಡೆ ನಡೆದ ಬ್ಯಾಂಕ್ ಕಳ್ಳತನ, ಅದಕ್ಕೆ ಸಂಬಂಧಿಸಿದ ಆರೋಪಿಗಳ ವಿಚಾರಣೆ ನಡೆಸುತ್ತಾ ಹೋದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.</p>.<p>ಪಿಎಸ್ಐ ವಿಜಯಕುಮಾರ ರಾಠೋಡ, ಬಿ.ಎಂ. ರಬಕವಿ, ಎಚ್.ಕೆ. ನೇರಳೆ, ಸಿದ್ದಪ್ಪ ಯಡಹಳ್ಳಿ, ಎಎಸ್ಐ ಸಿ.ಎಂ. ಕುಂಬಾರ, ಅಶೋಕ ಚವ್ಹಾಣ, ಎಂ.ಎಂ. ಸೊಲ್ಲಾಪುರ, ಆನಂದ ಗೋಳಪ್ಪನವರ, ರಾಜು ಒಡೆಯರ, ಬಿ.ಎ. ವಾಲಿಕಾರ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾಕನೂರ ಎಸ್ಬಿಐ ಬ್ಯಾಂಕ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಇಬ್ಬರನ್ನು ಬಂಧಿಸಲಾಗಿದ್ದು, 30 ಗ್ರಾಂ ಬಂಗಾರ, 1.25 ಲಕ್ಷ ನಗದು, ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್, ಪ್ರಕರಣದಲ್ಲಿ ಆರೋಪಿಗಳು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ಆದರೂ, ಪೊಲೀಸರು ಸತತವಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.</p>.<p>ಮಹಾರಾಷ್ಟ್ರದ ನಯಗಾಂವದ ಅಕ್ಷಯ ಅಂಬೋರೆ, ಕುನಾಲ್ ಚವ್ಹಾಣ ಬಂಧಿಸಲಾಗಿದ್ದು, ಅವರಿಂದ ಕಳ್ಳತನಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್, ಸಿಲಿಂಡರ್, ಕಬ್ಬಿಣದ ರಾಡು ವಶಪಡಿಸಿಕೊಳ್ಳಲಾಗಿದೆ.</p>.<p>ತೆಲಂಗಾಣ ರಾಜ್ಯದ ರಾಯಪರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಎಸ್ಬಿಐ ಬ್ಯಾಂಕ್ ಕಳ್ಳತನವನ್ನೂ ಮಾಡಿದ್ದು ಪತ್ತೆಯಾಗಿದೆ. ಅಲ್ಲಿ ಕಳ್ಳತನವಾಗಿದ್ದ 244 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಮಾಡಲಾಗಿದೆ.</p>.<p>ಇದಕ್ಕೂ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಹಮ್ಮದ್ ನವಾಬ್, ಖಮರುಲ್ಲಾ ಖಾನ್ ಬಂಧಿಸಲಾಗಿದೆ.</p>.<p>ಘಟನೆ ವಿವರ: ಆರು ಜನರ ತಂಡವು ಕಳ್ಳತನ ಮಾಡುವ ಆರು ತಿಂಗಳು ಮೊದಲೇ ಕಾಕನೂರಿನ ಎಸ್ಬಿಐ ಬ್ಯಾಂಕ್ ವೀಕ್ಷಿಸಿ, ಹೇಗೆ ಕಳ್ಳತನ ಮಾಡಬಹುದು ಎಂದು ನೋಡಿಕೊಂಡು ಹೋಗಿದ್ದರು. </p>.<p>ಯೋಜನೆಯಂತೆ ಕಾರಿನಲ್ಲಿ ಬಂದಿದ್ದ ಆರೋಪಿಗಳು 200 ಮೀಟರ್ ದೂರದಲ್ಲಿಯೇ ರಾತ್ರಿ 10ರ ಸುಮಾರಿಗೆ ಕಾರಿನಿಂದ ಇಳಿದು, ಚಾಲಕನಿಗೆ ಬೆಳಗಿನ ಜಾವ ನಾಲ್ಕಕ್ಕೆ ಬರಲು ತಿಳಿಸಿದ್ದರು. 11ರ ಸುಮಾರಿಗೆ ಬ್ಯಾಂಕಿಗೆ ಬಂದ ಆರೋಪಿಗಳು, ಹಿಂಭಾಗದಲ್ಲಿದ್ದ ಶೆಟರ್ ಮುರಿಗು ಒಳಪ್ರವೇಶಿಸಿದ್ದರು.</p>.<p>ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣ ಬಳಿದು ರೆಕಾರ್ಡ್ ಆಗದಂತೆ ಮಾಡಿದ್ದರು. ನಂತರ ಬ್ಯಾಂಕಿನಲ್ಲಿದ್ದ ಮಿನಿ ಲಾಕರ್ವೊಂದನ್ನು ಒಡೆದಿದ್ದರು. ನಂತರ ಇನ್ನೊಂದು ದೊಡ್ಡ ಲಾಕರ್ ಒಡೆದು, ಅದರಲ್ಲಿದ್ದ ಬಂಗಾರ, ಬೇರೆಡೆ ಇದ್ದ ನಗದು ಒಟ್ಟು ₹44 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಸಮಯವಾಗಿದ್ದರಿಂದ ಇನ್ನೆರಡು ಲಾಕರ್ಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರು. ₹32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಫಿಂಗರ್ ಪ್ರಿಂಟ್, ವಾಹನದ ಚಲನವಲನ ಗೊತ್ತಾಗದ್ದರಿಂದ ಪ್ರಕರಣ ಕಗ್ಗಂಟಾಗಿತ್ತು. ಬೇರೆಡೆ ನಡೆದ ಬ್ಯಾಂಕ್ ಕಳ್ಳತನ, ಅದಕ್ಕೆ ಸಂಬಂಧಿಸಿದ ಆರೋಪಿಗಳ ವಿಚಾರಣೆ ನಡೆಸುತ್ತಾ ಹೋದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.</p>.<p>ಪಿಎಸ್ಐ ವಿಜಯಕುಮಾರ ರಾಠೋಡ, ಬಿ.ಎಂ. ರಬಕವಿ, ಎಚ್.ಕೆ. ನೇರಳೆ, ಸಿದ್ದಪ್ಪ ಯಡಹಳ್ಳಿ, ಎಎಸ್ಐ ಸಿ.ಎಂ. ಕುಂಬಾರ, ಅಶೋಕ ಚವ್ಹಾಣ, ಎಂ.ಎಂ. ಸೊಲ್ಲಾಪುರ, ಆನಂದ ಗೋಳಪ್ಪನವರ, ರಾಜು ಒಡೆಯರ, ಬಿ.ಎ. ವಾಲಿಕಾರ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>