<p><strong>ಜಮಖಂಡಿ</strong>: ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಮತ್ತು ಆಧ್ಯಾತ್ಮಿಕ ಹಬ್ಬ, ಕೆಟ್ಟದರ ಮೇಲೆ ಒಳ್ಳೆಯದರ ಜಯವನ್ನು ಸಾರುವ ಹಬ್ಬವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.</p>.<p>ಇಲ್ಲಿನ ಹೊಕ್ಕಳಬಾವಿ ಮೈದಾನದಲ್ಲಿ ಮಂಗಳವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಲಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಹೋಳಿ ಹುಣ್ಣಿಮೆ ಕೇವಲ ಬಣ್ಣಗಳ ಹಬ್ಬವಲ್ಲ. ಅದು ಧರ್ಮದ ಜಯ, ಭಕ್ತಿಯ ಶಕ್ತಿ ಮತ್ತು ದುಷ್ಟತನದ ನಾಶದ ಸಂಕೇತವಾಗಿದೆ ಎಂದರು.</p>.<p>ವಿವಿಧ ಮಠಾಧೀಶರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ, ಓಲೇಮಠ, ಶ್ರೀರಾಮ ಮಂದಿರ, ಹನುಮಾನ ದೇವಸ್ಥಾನದ ಆವರಣದಲ್ಲಿ ಕಾಮದಹನ ಮಾಡಲಾಯಿತು.</p>.<p>ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀ, ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಕೃಷ್ಣಾನಂದ ಅವಧೂತರು, ಕೊಣ್ಣೂರ ವಿಶ್ವಪ್ರಭುದೇವ ಶ್ರೀಗಳು, ಮಾದುಲಿಂಗ ಮಹಾರಾಜರು, ಅಜಯ ಕಡಪಟ್ಟಿ, ರಾಹುಲ ಕಲೂತಿ, ಯಮನೂರ ಮೂಲಂಗಿ, ವಿಠ್ಠಲ ಪರೀಟ್, ಪ್ರಭು ಜನವಾಡ, ಗಣೇಶ ಶಿರಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಮತ್ತು ಆಧ್ಯಾತ್ಮಿಕ ಹಬ್ಬ, ಕೆಟ್ಟದರ ಮೇಲೆ ಒಳ್ಳೆಯದರ ಜಯವನ್ನು ಸಾರುವ ಹಬ್ಬವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.</p>.<p>ಇಲ್ಲಿನ ಹೊಕ್ಕಳಬಾವಿ ಮೈದಾನದಲ್ಲಿ ಮಂಗಳವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಲಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಹೋಳಿ ಹುಣ್ಣಿಮೆ ಕೇವಲ ಬಣ್ಣಗಳ ಹಬ್ಬವಲ್ಲ. ಅದು ಧರ್ಮದ ಜಯ, ಭಕ್ತಿಯ ಶಕ್ತಿ ಮತ್ತು ದುಷ್ಟತನದ ನಾಶದ ಸಂಕೇತವಾಗಿದೆ ಎಂದರು.</p>.<p>ವಿವಿಧ ಮಠಾಧೀಶರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ, ಓಲೇಮಠ, ಶ್ರೀರಾಮ ಮಂದಿರ, ಹನುಮಾನ ದೇವಸ್ಥಾನದ ಆವರಣದಲ್ಲಿ ಕಾಮದಹನ ಮಾಡಲಾಯಿತು.</p>.<p>ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀ, ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಕೃಷ್ಣಾನಂದ ಅವಧೂತರು, ಕೊಣ್ಣೂರ ವಿಶ್ವಪ್ರಭುದೇವ ಶ್ರೀಗಳು, ಮಾದುಲಿಂಗ ಮಹಾರಾಜರು, ಅಜಯ ಕಡಪಟ್ಟಿ, ರಾಹುಲ ಕಲೂತಿ, ಯಮನೂರ ಮೂಲಂಗಿ, ವಿಠ್ಠಲ ಪರೀಟ್, ಪ್ರಭು ಜನವಾಡ, ಗಣೇಶ ಶಿರಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>