ನೂತನ ಗ್ರಂಥಾಲಯ ಉದ್ಘಾಟಿಸಿದ ಚಿಂತಕ ಪರಶುರಾಮ ಮಹರಾಜನವರ ಮಾತನಾಡಿ, ನಮ್ಮೆಲ್ಲರ ಏಳ್ಗೆಗಾಗಿ ಬಾಬಾಸಾಹೇಬರು ಸ್ಪಷ್ಟ ಕಾರ್ಯಸೂಚಿ ನೀಡಿದ್ದಾರೆ. ಅದರಲ್ಲಿ ಅತಿ ಮುಖ್ಯವಾದುದು ಓದುವುದು. ಬಾಬಾಸಾಹೇಬರು ಓದುವ ಹವ್ಯಾಸ ಹೊಂದಿದ್ದರು, ಅದರಿಂದ ಅಪಾರ ಜ್ಞಾನ ಗಳಿಸಿದ್ದರು. ಯುಗಪುರುಷರಾಗಿ, ಕೋಟ್ಯಂತರ ಜನರ ವಿಮೋಚಕರಾಗಿ, ಸಂವಿಧಾನ ಶಿಲ್ಪಿಯಾಗಿ ಅವರು ಬೆಳಗಿದರು. ಬಾಬಾಸಾಹೇಬರ ಆಶಯದಂತೆ ಇಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದ್ದು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಓದಿ, ಅರಿವು ಹೆಚ್ಚಿಸಿಕೊಳ್ಳಬೇಕು ಎಂದರು.