ಮಹಾಲಿಂಗಪುರ : ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಕರೆ ನೀಡಿದ್ದ ಮಹಾಲಿಂಗಪುರ ಬಂದ್ ಯಶಸ್ವಿಯಾಗಿದೆ.
ಮುಂಜಾನೆ 10 ಗಂಟೆಗೆ ಪಟ್ಟಣದ ಬಸವ ವೃತ್ತದಿಂದ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು, ಹೋರಾಟಗಾರರು, ರೈತರು ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಿದರು.
ಸಂಗಾನಟ್ಟಿಯ ಹಲಗೆಮೇಳ, ಮಹಾಲಿಂಗಪುರದ ಡೊಳ್ಳಿನ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಮಹಾಲಿಂಗಪುರ ಬಂದ್ ಬೆಂಬಲಿಸಿ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದ್ದರು
ಬಸ್ ಸಂಚಾರ ಸಂಪೂರ್ಣ ಬಂದ್
ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲ್ಲೂಕು ರಚನೆಗಾಗಿ 126 ದಿನಗಳಿಂದ ಹೋರಾಟ ನಡೆದಿದೆ.