ಹುನಗುಂದ: ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ 20ರ ನಾಯರ್ ಪೆಟ್ರೋಲ್ ಪಂಪ್ ಹತ್ತಿರ ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಪುಟಿದು ಬಿದ್ದ ರಾಶಿ ಯಂತ್ರದ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಟಪ್ಟ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಯಮನಪ್ಪ ಮಾದರ (26) ಮೃತ ವ್ಯಕ್ತಿ. ಕೂಲಿ ಕೆಲಸ ಮಾಡುತ್ತಿದ್ದ ಇವರು ಟ್ರ್ಯಾಕ್ಟರ್ ನೊಂದಿಗೆ ರಾಶಿ ಯಂತ್ರ ಜೋಡಿಸಿಕೊಂಡು ಚಾಲಕನೊಂದಿಗೆ ಯಂತ್ರದ ಮೇಲೆ ಮೇಲೆ ಕುಳಿತು ಬನ್ನಹಟ್ಟಿ ಗ್ರಾಮದಿಂದ ಹುನಗುಂದ ಪಟ್ಟಣದ ಕಡೆಗೆ ಹೋಗುತ್ತಿದ್ದರು.
ಅಪಘಾತ ಸಂಭವಿಸಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೃತರ ತಾಯಿ ದೂರು ನೀಡಿದ್ದಾರೆ.