<p><strong>ಗುಳೇದಗುಡ್ಡ</strong>: ಗ್ರಾಮೀಣ ಪ್ರದೇಶದಲ್ಲಿ ಮದುವೆಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಹಾಗೆ ಮಾಡದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹ ಮಾಡಿಕೊಂಡರೆ ಆರ್ಥಿಕವಾಗಿ ದುಂದುವೆಚ್ಚ ಮಾಡದೆ ಅದನ್ನು ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡಿದರೆ ಭವಿಷ್ಯದಲ್ಲಿ ಅನುಕೂಲವಾಗುವುದು ಎಂದು ಶಾಂತಮ್ಮ ತಾಯಿಯವರು ಹೇಳಿದರು.</p>.<p>ತಾಲ್ಲೂಕಿನ ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ಮಂಗಳವಾರ ಪೂರ್ಣಾನಂದ ಮುನಿಗಳ ಆಶ್ರಮ ಮತ್ತು ಶ್ರದ್ದಾನಂದ ಮಠದಲ್ಲಿ ವಿಶ್ವಶಾಂತಿಗಾಗಿ ಜರುಗಿದ 16 ವರ್ಷದ ಕೋಟಿಜಪಯಜ್ಞ ಸಮಾರೋಪ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.</p>.<p>ಅದ್ದೂರಿಯಾಗಿ ಮದುವೆ ಮಾಡುವುದು ರೂಢಿ ಆಗಿದೆ. ಹಣ ಖರ್ಚು ಮಾಡದೆ ಉಳಿತಾಯ ಮಾಡಬೇಕು ಹಾಗೂ ಉತ್ತಮವಾಗಿ ಅನೋನ್ಯವಾಗಿ ಇರುವ ಬದುಕು ನಿಮ್ಮದಾಗಲಿ ಎಂದರು.</p>.<p>ಹಾನಾಪೂರ ಎಸ್.ಪಿ.ಗ್ರಾಮ ಹಾಗೂ ಶ್ರದ್ದಾನಂದ ಶ್ರೀಮಠದ ಪರವಾಗಿ ಒಟ್ಟು ಎರಡು ಜೋಡಿ ವಿವಾಹಗಳನ್ನು ಮಾಡಿ ಕೊಡಲಾಯಿತು. ಗ್ರಾಮದ ಎಲ್ಲ ಯುವಕರು, ಗ್ರಾಮದ ಗುರು ಹಿರಿಯರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ಗ್ರಾಮೀಣ ಪ್ರದೇಶದಲ್ಲಿ ಮದುವೆಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಹಾಗೆ ಮಾಡದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹ ಮಾಡಿಕೊಂಡರೆ ಆರ್ಥಿಕವಾಗಿ ದುಂದುವೆಚ್ಚ ಮಾಡದೆ ಅದನ್ನು ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡಿದರೆ ಭವಿಷ್ಯದಲ್ಲಿ ಅನುಕೂಲವಾಗುವುದು ಎಂದು ಶಾಂತಮ್ಮ ತಾಯಿಯವರು ಹೇಳಿದರು.</p>.<p>ತಾಲ್ಲೂಕಿನ ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ಮಂಗಳವಾರ ಪೂರ್ಣಾನಂದ ಮುನಿಗಳ ಆಶ್ರಮ ಮತ್ತು ಶ್ರದ್ದಾನಂದ ಮಠದಲ್ಲಿ ವಿಶ್ವಶಾಂತಿಗಾಗಿ ಜರುಗಿದ 16 ವರ್ಷದ ಕೋಟಿಜಪಯಜ್ಞ ಸಮಾರೋಪ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.</p>.<p>ಅದ್ದೂರಿಯಾಗಿ ಮದುವೆ ಮಾಡುವುದು ರೂಢಿ ಆಗಿದೆ. ಹಣ ಖರ್ಚು ಮಾಡದೆ ಉಳಿತಾಯ ಮಾಡಬೇಕು ಹಾಗೂ ಉತ್ತಮವಾಗಿ ಅನೋನ್ಯವಾಗಿ ಇರುವ ಬದುಕು ನಿಮ್ಮದಾಗಲಿ ಎಂದರು.</p>.<p>ಹಾನಾಪೂರ ಎಸ್.ಪಿ.ಗ್ರಾಮ ಹಾಗೂ ಶ್ರದ್ದಾನಂದ ಶ್ರೀಮಠದ ಪರವಾಗಿ ಒಟ್ಟು ಎರಡು ಜೋಡಿ ವಿವಾಹಗಳನ್ನು ಮಾಡಿ ಕೊಡಲಾಯಿತು. ಗ್ರಾಮದ ಎಲ್ಲ ಯುವಕರು, ಗ್ರಾಮದ ಗುರು ಹಿರಿಯರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>