<p><strong>ಮುಧೋಳ:</strong> ಜಿಲ್ಲಾಡಳಿತದಿಂದ ಫೆ. 22ರಿಂದ 24ರ ವರೆಗೆ ನಡೆಯಲಿರುವ ರನ್ನ ವೈಭವದ ಸಿದ್ಧತೆಗಳು ಭರದಿಂದ ಸಾಗಿವೆ. ನಗರವು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. </p>.<p>26 ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಎಸ್.ಪಿ., ಜಿಲ್ಲಾ ಪಂಚಾಯ್ತಿ ಸಿಇಒ, ಜಮಖಂಡಿಯ ಎಸಿ, ಡಿಎಸ್ಪಿ ಅವರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.</p>.<p>ರನ್ನ ವೈಭವದ ಪ್ರಯುಕ್ತ ಈಗಾಗಲೇ ಮೂಲೆಗುಂಪಾಗಿದ್ದ ರನ್ನ ಗದಾಯುದ್ದದ ಗದೆಗಳಿಗೆ ಬಣ್ಣ ಬಳೆಯುವ ಕಾರ್ಯ ನಡೆಯುತ್ತಿದೆ. ರನ್ನ ಭವನ, ಗ್ರಂಥಾಲಯ, ಕಸಾಪ ಕಟ್ಟಡದ ಸುತ್ತಮುತ್ತ ರನ್ನ ಸ್ನೇಹಿ ಬಳಗ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದೆ.</p>.<p>ರನ್ನ ರಥಯಾತ್ರೆಗೆ ಫೆ.13ರಂದು ರನ್ನ ಬೆಳಗಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಚಾಲನೆ ನೀಡಿದರು. ಪ್ರತಿ ಗ್ರಾಮಕ್ಕೂ ಸಂಚರಿಸುವ ರಥಯಾತ್ರೆಗೆ ವ್ಯಾಪಕ ಸ್ವಾಗತ ಸಿಗುತ್ತಿದೆ. ಪಕ್ಷಭೇದ ಮರೆತು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದಾರೆ.</p>.<p>ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಉತ್ಸವ ಮುಧೋಳದಲ್ಲಿ ರನ್ನ ಹೆಸರಿನಲ್ಲಿ ವೈಭವ ಮರುಕಳಿಸಲಿ ಎಂದು 2012ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ ರನ್ನ ವೈಭವನ್ನು ಆರಂಭಿಸಿದರು.</p>.<p>ಬಳಿಕ 2014, 2015, 2018 ರಲ್ಲಿ ವೈಭವ ನಡೆದ ಬಳಿಕ ಕೋವಿಡ್ ಕಾರಣದಿಂದ ನಿಂತು ಹೋಗಿತ್ತು. ಇದೀಗ ಆರು ವರ್ಷಗಳ ನಂತರ ರನ್ನ ವೈಭವ ಮರುಕಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರರ ಶ್ರಮ ಇದಕ್ಕೆ ಕಾರಣವಾಗಿದೆ.</p>.<p>ತಾಲ್ಲೂಕು, ಜಿಲ್ಲೆಗೆ ಮಾತ್ರ ರನ್ನ ವೈಭವ ಸೀಮಿತವಾಗಿತ್ತು. ಈ ಸಲ ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸತೀಶ ಜಾರಕಿಹೊಳಿ ಹಾಗೂ ಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.</p>.<p>ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಎಸ್ಪಿ ಅವರನಾಥರೆಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ, ಎಸಿ ಸ್ವೇತಾ ಬೀಡಿಕರ, ಡಿಎಸ್ಪಿ ಶಾಂತವೀರ ಮುಂತಾದ ಜಿಲ್ಲಾ ಮತ್ತು ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳು ಮುಧೋಳದಲ್ಲಿ ಬೀಡು ಬಿಟ್ಟು ಕಾರ್ಯ ಮಾಡುತ್ತಿರುವದು ವಿಶೇಷ.</p>.<p>ರನ್ನ ವೈಭವ 2025ರ ಅಂಗವಾಗಿ ನಾಡಿನ ಶ್ರೇಷ್ಠ ಕವಿ, ಕವಯತ್ರಿಯರು, ಕಲಾವಿದರು. ನಟ-ನಟಿಯರು, ಸಂಗೀತ ರಸದೌತಣ, ನೃತ್ಯ, ಅಂತರ ರಾಜ್ಯದ ಕಲಾ ತಂಡಗಳು ಪಾಲ್ಗೊಂಡು, ಕಲಾ ವೈಭವವನ್ನು ಪ್ರದರ್ಶಿಸಲಿದ್ದಾರೆ. ಸಕಲ ಕಲಾ ವಿದ್ವಾಂಸರ ಸಮಾಗಮವು ಈ ಬಾರಿಯ ರನ್ನ ವೈಭವದ ವಿಶೇಷತೆಯಾಗಲಿದೆ.</p>.<p>ರನ್ನ ಪ್ರತಿಷ್ಠಾನದ ವತಿಯಿಂದ ರನ್ನ 2014ರಲ್ಲಿ ಜರುಗಿದ ರನ್ನ ಉತ್ಸವದಲ್ಲಿ ಹಳಗನ್ನಡ ಪ್ರಶಸ್ತಿಯನ್ನು ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ನೀಡಲಾಗಿತ್ತು. ಡಾ.ಷ.ಶೆಟ್ಟರ, ಹಂಪ ನಾಗರಾಜಯ್ಯ, ವೆಂಕಟಾಚಲಯ್ಯ ಅವರಿಗೆ ನೀಡಿಲಾಗಿತ್ತು. ಈ ಸಲ ಒಟ್ಟು ಆರು ಜನರಿಗೆ ಪ್ರಶಸ್ತಿ ನೀಡಬೇಕಾಗಿದೆ.</p>.<blockquote>ಆರು ವರ್ಷಗಳ ನಂತರ ಮರುಕಳಿಸುತ್ತಿದೆ ರನ್ನ ವೈಭವ ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18ರಂದು ಸಿಎಂ ಚಾಲನೆ ಕಲಾ ವೈಭವದ ಪ್ರದರ್ಶನ. ಸಕಲ ಕಲಾ ವಿದ್ವಾಂಸರ ಸಮಾಗಮ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಧೋಳ:</strong> ಜಿಲ್ಲಾಡಳಿತದಿಂದ ಫೆ. 22ರಿಂದ 24ರ ವರೆಗೆ ನಡೆಯಲಿರುವ ರನ್ನ ವೈಭವದ ಸಿದ್ಧತೆಗಳು ಭರದಿಂದ ಸಾಗಿವೆ. ನಗರವು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. </p>.<p>26 ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಎಸ್.ಪಿ., ಜಿಲ್ಲಾ ಪಂಚಾಯ್ತಿ ಸಿಇಒ, ಜಮಖಂಡಿಯ ಎಸಿ, ಡಿಎಸ್ಪಿ ಅವರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.</p>.<p>ರನ್ನ ವೈಭವದ ಪ್ರಯುಕ್ತ ಈಗಾಗಲೇ ಮೂಲೆಗುಂಪಾಗಿದ್ದ ರನ್ನ ಗದಾಯುದ್ದದ ಗದೆಗಳಿಗೆ ಬಣ್ಣ ಬಳೆಯುವ ಕಾರ್ಯ ನಡೆಯುತ್ತಿದೆ. ರನ್ನ ಭವನ, ಗ್ರಂಥಾಲಯ, ಕಸಾಪ ಕಟ್ಟಡದ ಸುತ್ತಮುತ್ತ ರನ್ನ ಸ್ನೇಹಿ ಬಳಗ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದೆ.</p>.<p>ರನ್ನ ರಥಯಾತ್ರೆಗೆ ಫೆ.13ರಂದು ರನ್ನ ಬೆಳಗಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಚಾಲನೆ ನೀಡಿದರು. ಪ್ರತಿ ಗ್ರಾಮಕ್ಕೂ ಸಂಚರಿಸುವ ರಥಯಾತ್ರೆಗೆ ವ್ಯಾಪಕ ಸ್ವಾಗತ ಸಿಗುತ್ತಿದೆ. ಪಕ್ಷಭೇದ ಮರೆತು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದಾರೆ.</p>.<p>ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಉತ್ಸವ ಮುಧೋಳದಲ್ಲಿ ರನ್ನ ಹೆಸರಿನಲ್ಲಿ ವೈಭವ ಮರುಕಳಿಸಲಿ ಎಂದು 2012ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ ರನ್ನ ವೈಭವನ್ನು ಆರಂಭಿಸಿದರು.</p>.<p>ಬಳಿಕ 2014, 2015, 2018 ರಲ್ಲಿ ವೈಭವ ನಡೆದ ಬಳಿಕ ಕೋವಿಡ್ ಕಾರಣದಿಂದ ನಿಂತು ಹೋಗಿತ್ತು. ಇದೀಗ ಆರು ವರ್ಷಗಳ ನಂತರ ರನ್ನ ವೈಭವ ಮರುಕಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರರ ಶ್ರಮ ಇದಕ್ಕೆ ಕಾರಣವಾಗಿದೆ.</p>.<p>ತಾಲ್ಲೂಕು, ಜಿಲ್ಲೆಗೆ ಮಾತ್ರ ರನ್ನ ವೈಭವ ಸೀಮಿತವಾಗಿತ್ತು. ಈ ಸಲ ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸತೀಶ ಜಾರಕಿಹೊಳಿ ಹಾಗೂ ಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.</p>.<p>ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಎಸ್ಪಿ ಅವರನಾಥರೆಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ, ಎಸಿ ಸ್ವೇತಾ ಬೀಡಿಕರ, ಡಿಎಸ್ಪಿ ಶಾಂತವೀರ ಮುಂತಾದ ಜಿಲ್ಲಾ ಮತ್ತು ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳು ಮುಧೋಳದಲ್ಲಿ ಬೀಡು ಬಿಟ್ಟು ಕಾರ್ಯ ಮಾಡುತ್ತಿರುವದು ವಿಶೇಷ.</p>.<p>ರನ್ನ ವೈಭವ 2025ರ ಅಂಗವಾಗಿ ನಾಡಿನ ಶ್ರೇಷ್ಠ ಕವಿ, ಕವಯತ್ರಿಯರು, ಕಲಾವಿದರು. ನಟ-ನಟಿಯರು, ಸಂಗೀತ ರಸದೌತಣ, ನೃತ್ಯ, ಅಂತರ ರಾಜ್ಯದ ಕಲಾ ತಂಡಗಳು ಪಾಲ್ಗೊಂಡು, ಕಲಾ ವೈಭವವನ್ನು ಪ್ರದರ್ಶಿಸಲಿದ್ದಾರೆ. ಸಕಲ ಕಲಾ ವಿದ್ವಾಂಸರ ಸಮಾಗಮವು ಈ ಬಾರಿಯ ರನ್ನ ವೈಭವದ ವಿಶೇಷತೆಯಾಗಲಿದೆ.</p>.<p>ರನ್ನ ಪ್ರತಿಷ್ಠಾನದ ವತಿಯಿಂದ ರನ್ನ 2014ರಲ್ಲಿ ಜರುಗಿದ ರನ್ನ ಉತ್ಸವದಲ್ಲಿ ಹಳಗನ್ನಡ ಪ್ರಶಸ್ತಿಯನ್ನು ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ನೀಡಲಾಗಿತ್ತು. ಡಾ.ಷ.ಶೆಟ್ಟರ, ಹಂಪ ನಾಗರಾಜಯ್ಯ, ವೆಂಕಟಾಚಲಯ್ಯ ಅವರಿಗೆ ನೀಡಿಲಾಗಿತ್ತು. ಈ ಸಲ ಒಟ್ಟು ಆರು ಜನರಿಗೆ ಪ್ರಶಸ್ತಿ ನೀಡಬೇಕಾಗಿದೆ.</p>.<blockquote>ಆರು ವರ್ಷಗಳ ನಂತರ ಮರುಕಳಿಸುತ್ತಿದೆ ರನ್ನ ವೈಭವ ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18ರಂದು ಸಿಎಂ ಚಾಲನೆ ಕಲಾ ವೈಭವದ ಪ್ರದರ್ಶನ. ಸಕಲ ಕಲಾ ವಿದ್ವಾಂಸರ ಸಮಾಗಮ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>