ನಂತರ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ದೀಪ ಬೆಳಗಿಸಿ ನನ್ನ ಮತ ನನ್ನ ಹಕ್ಕು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಆರೋಗ್ಯ ಇಲಾಖೆಯ ಕೆ.ಎಫ್.ಮಾಯಾಚಾರಿ, ಪ್ರಶಾಂತ ಬೂದಿಹಾಳ, ಹನಮಂತ ಚನ್ನದಾಸರ, ಸೋಮನಾಥ ಕುರಿಗಾರ, ಬಿ.ಜಿ.ಹಿರೇಮಠ, ಹನಮಂತ ಹಳ್ಳಿ, ಸುನಿತಾ ಮೆಣಸಗಿ, ಅನಿಲ ಪೂಜಾರಿ, ಪೌರ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.