<p><strong>ಬಾಗಲಕೋಟೆ:</strong> ಹೊಸದಾಗಿ ಪಡಿತರ ಚೀಟಿ ಪಡೆಯಲು, ಹೆಸರು ಸೇರ್ಪಡೆ, ಡಿಲಿಟ್ ಮಾಡಿಸಲು, ಬೇರೆ ಕಡೆಗೆ ವರ್ಗಾವಣೆ ಮಾಡಿಸಲು ಜನರು ನಿತ್ಯ ಕರ್ನಾಟಕ ಒನ್ ಕೇಂದ್ರಕ್ಕೆ ಅಲೆಯುತ್ತಿದ್ದಾರೆ.</p>.<p>ಹೊಸದಾಗಿ ಪಡಿತರ ಚೀಟಿ ಪಡೆಯಲು ಜನರು ಹಲವಾರು ತಿಂಗಳುಗಳಿಂದ ಕಾಯುತ್ತಿದ್ದಾರೆ. ಆದರೆ, ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇಂದು, ನಾಳೆ ಎಂದು ಮುಂದು ಹಾಕುತ್ತಲೇ ಬರುತ್ತಿದೆ.</p>.<p>ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಿಗೆ ಪಡಿತರ ಚೀಟಿಯನ್ನೇ ಆಧಾರವಾಗಿ ಕೇಳುತ್ತಾರೆ. ಆದರೆ, ಅದೇ ಸಿಗುತ್ತಿಲ್ಲ. ಅರ್ಜಿ ಹಾಕಿ ವರ್ಷದಿಂದ ಕಾಯುತ್ತಿರುವವರಿಗೂ ಪಡಿತರ ಚೀಟಿ ಸಿಕ್ಕಿಲ್ಲ.</p>.<p>ಪಡಿತರ ಚೀಟಿ ಅರ್ಜಿ ಹಾಕಲು ಹದಿನೈದು, ಇಪ್ಪತ್ತು ದಿನಕ್ಕೊಮೆ ಅವಕಾಶ ನೀಡಲಾಗುತ್ತದೆ. ಅದು ಒಂದೆರಡು ಗಂಟೆಗೆ ಮಾತ್ರ ಸೀಮಿತವಾಗಿರುತ್ತದೆ. ಆಗಲೂ ನೆಟ್ವರ್ಕ್ ಸಮಸ್ಯೆ ಜನರನ್ನು ಕಾಡುತ್ತಲೇ ಇರುತ್ತದೆ.</p>.<p>ಅರ್ಜಿ ಹಾಕಲು ಅವಕಾಶ ನೀಡುವ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. ಬಾಯಿ ಮಾತಿನಿಂದಲೇ ತಿಳಿದುಕೊಳ್ಳುವ ಜನರು ಕರ್ನಾಟಕ ಒನ್ ಸೆಂಟರ್ಗೆ ಬಂದರೆ ಜನರು ಸಾಲು, ಸಾಲಾಗಿ ನಿಂತಿರುತ್ತಾರೆ. ಸಂಜೆಯವರೆಗೂ ನಿಂತರೂ ಅರ್ಜಿ ಸಲ್ಲಿಸಲು ಆಗುವುದಿಲ್ಲ. </p>.<p>ಪಡಿತರ ಚೀಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು, ಡಿಲಿಟ್ ಮಾಡಿಸಲೂ, ಬೇರೆ ಕಡೆಗೆ ವರ್ಗಾವಣೆ ಮಾಡಲೂ ಅವಕಾಶ ಸಿಗುತ್ತಿಲ್ಲ. ಜನರು ಹತ್ತಾರು ಬಾರಿ ಅಲೆದಾಡಬೇಕಿದೆ.</p>.<p>ಕರ್ನಾಟಕ ಒನ್ನಲ್ಲಿ ಮಾತ್ರ ಅವಕಾಶ ನೀಡುವುದರಿಂದ ಎಲ್ಲರೂ ಅಲ್ಲಿಗೇ ಬರಬೇಕು. ಅಲ್ಲಿ ಆಧಾರ್ ಕಾರ್ಡ್ ನೀಡುವುದು, ವಿವಿಧ ದಾಖಲೆಗಳ ತಿದ್ದುಪಡಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವುದು, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ವಿವಿಧ ಕೆಲಸಗಳಿರುವುದರಿಂದ ಗಂಟೆಗಟ್ಟಲೇ ಕಾಯಬೇಕಾಗುತ್ತದೆ.</p>.<p>ಬಾಗಲಕೋಟೆಯಲ್ಲಿರುವ ನವನಗರದಲ್ಲಿ ಕರ್ನಾಟಕ ಒನ್ ಸೆಂಟರ್ ತೆಗೆಯುವುದು ಬೆಳಿಗ್ಗೆ 8 ಗಂಟೆಯಾದರೂ, ಜನರು ಬೆಳಿಗ್ಗೆ 6 ಗಂಟೆಯಿಂದಲೇ ಹೆಸರು ನೋಂದಾಯಿಸಲು ಬರುತ್ತಾರೆ. ದಿನ ಪೂರ್ತಿ ಇದೇ ಕೆಲಸವಾಗುವುದರಿಂದ ದುಡಿಮೆಯೂ ಹೊಡೆತ ಬೀಳುತ್ತದೆ.</p>.<p>‘ಕೆಲ ದಿನಗಳ ಹಿಂದೆ ಹೊಸ ಪಡಿತರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ನೆಟ್ವರ್ಕ್ ಸಮಸ್ಯೆಯ ನಡುವೆಯೇ ಕೆಲವರ ಅರ್ಜಿ ಸಲ್ಲಿಸಲಾಗಿದೆ. ನಿತ್ಯವೂ ಹತ್ತಾರು ಜನರು ಕೇಳಿಕೊಂಡು ಬರುತ್ತಿದ್ದಾರೆ. ಆದರೆ, ಮತ್ತೇ ಯಾವಾಗ ಅವಕಾಶ ಕೊಡುತ್ತಾರೆ ಗೊತ್ತಿಲ್ಲ’ ಎನ್ನುತ್ತಾರೆ ಕರ್ನಾಟಕ ಒನ್ ಸಿಬ್ಬಂದಿಯೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಹೊಸದಾಗಿ ಪಡಿತರ ಚೀಟಿ ಪಡೆಯಲು, ಹೆಸರು ಸೇರ್ಪಡೆ, ಡಿಲಿಟ್ ಮಾಡಿಸಲು, ಬೇರೆ ಕಡೆಗೆ ವರ್ಗಾವಣೆ ಮಾಡಿಸಲು ಜನರು ನಿತ್ಯ ಕರ್ನಾಟಕ ಒನ್ ಕೇಂದ್ರಕ್ಕೆ ಅಲೆಯುತ್ತಿದ್ದಾರೆ.</p>.<p>ಹೊಸದಾಗಿ ಪಡಿತರ ಚೀಟಿ ಪಡೆಯಲು ಜನರು ಹಲವಾರು ತಿಂಗಳುಗಳಿಂದ ಕಾಯುತ್ತಿದ್ದಾರೆ. ಆದರೆ, ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇಂದು, ನಾಳೆ ಎಂದು ಮುಂದು ಹಾಕುತ್ತಲೇ ಬರುತ್ತಿದೆ.</p>.<p>ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಿಗೆ ಪಡಿತರ ಚೀಟಿಯನ್ನೇ ಆಧಾರವಾಗಿ ಕೇಳುತ್ತಾರೆ. ಆದರೆ, ಅದೇ ಸಿಗುತ್ತಿಲ್ಲ. ಅರ್ಜಿ ಹಾಕಿ ವರ್ಷದಿಂದ ಕಾಯುತ್ತಿರುವವರಿಗೂ ಪಡಿತರ ಚೀಟಿ ಸಿಕ್ಕಿಲ್ಲ.</p>.<p>ಪಡಿತರ ಚೀಟಿ ಅರ್ಜಿ ಹಾಕಲು ಹದಿನೈದು, ಇಪ್ಪತ್ತು ದಿನಕ್ಕೊಮೆ ಅವಕಾಶ ನೀಡಲಾಗುತ್ತದೆ. ಅದು ಒಂದೆರಡು ಗಂಟೆಗೆ ಮಾತ್ರ ಸೀಮಿತವಾಗಿರುತ್ತದೆ. ಆಗಲೂ ನೆಟ್ವರ್ಕ್ ಸಮಸ್ಯೆ ಜನರನ್ನು ಕಾಡುತ್ತಲೇ ಇರುತ್ತದೆ.</p>.<p>ಅರ್ಜಿ ಹಾಕಲು ಅವಕಾಶ ನೀಡುವ ಮಾಹಿತಿಯನ್ನು ಸರಿಯಾಗಿ ನೀಡುವುದಿಲ್ಲ. ಬಾಯಿ ಮಾತಿನಿಂದಲೇ ತಿಳಿದುಕೊಳ್ಳುವ ಜನರು ಕರ್ನಾಟಕ ಒನ್ ಸೆಂಟರ್ಗೆ ಬಂದರೆ ಜನರು ಸಾಲು, ಸಾಲಾಗಿ ನಿಂತಿರುತ್ತಾರೆ. ಸಂಜೆಯವರೆಗೂ ನಿಂತರೂ ಅರ್ಜಿ ಸಲ್ಲಿಸಲು ಆಗುವುದಿಲ್ಲ. </p>.<p>ಪಡಿತರ ಚೀಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು, ಡಿಲಿಟ್ ಮಾಡಿಸಲೂ, ಬೇರೆ ಕಡೆಗೆ ವರ್ಗಾವಣೆ ಮಾಡಲೂ ಅವಕಾಶ ಸಿಗುತ್ತಿಲ್ಲ. ಜನರು ಹತ್ತಾರು ಬಾರಿ ಅಲೆದಾಡಬೇಕಿದೆ.</p>.<p>ಕರ್ನಾಟಕ ಒನ್ನಲ್ಲಿ ಮಾತ್ರ ಅವಕಾಶ ನೀಡುವುದರಿಂದ ಎಲ್ಲರೂ ಅಲ್ಲಿಗೇ ಬರಬೇಕು. ಅಲ್ಲಿ ಆಧಾರ್ ಕಾರ್ಡ್ ನೀಡುವುದು, ವಿವಿಧ ದಾಖಲೆಗಳ ತಿದ್ದುಪಡಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವುದು, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ವಿವಿಧ ಕೆಲಸಗಳಿರುವುದರಿಂದ ಗಂಟೆಗಟ್ಟಲೇ ಕಾಯಬೇಕಾಗುತ್ತದೆ.</p>.<p>ಬಾಗಲಕೋಟೆಯಲ್ಲಿರುವ ನವನಗರದಲ್ಲಿ ಕರ್ನಾಟಕ ಒನ್ ಸೆಂಟರ್ ತೆಗೆಯುವುದು ಬೆಳಿಗ್ಗೆ 8 ಗಂಟೆಯಾದರೂ, ಜನರು ಬೆಳಿಗ್ಗೆ 6 ಗಂಟೆಯಿಂದಲೇ ಹೆಸರು ನೋಂದಾಯಿಸಲು ಬರುತ್ತಾರೆ. ದಿನ ಪೂರ್ತಿ ಇದೇ ಕೆಲಸವಾಗುವುದರಿಂದ ದುಡಿಮೆಯೂ ಹೊಡೆತ ಬೀಳುತ್ತದೆ.</p>.<p>‘ಕೆಲ ದಿನಗಳ ಹಿಂದೆ ಹೊಸ ಪಡಿತರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ನೆಟ್ವರ್ಕ್ ಸಮಸ್ಯೆಯ ನಡುವೆಯೇ ಕೆಲವರ ಅರ್ಜಿ ಸಲ್ಲಿಸಲಾಗಿದೆ. ನಿತ್ಯವೂ ಹತ್ತಾರು ಜನರು ಕೇಳಿಕೊಂಡು ಬರುತ್ತಿದ್ದಾರೆ. ಆದರೆ, ಮತ್ತೇ ಯಾವಾಗ ಅವಕಾಶ ಕೊಡುತ್ತಾರೆ ಗೊತ್ತಿಲ್ಲ’ ಎನ್ನುತ್ತಾರೆ ಕರ್ನಾಟಕ ಒನ್ ಸಿಬ್ಬಂದಿಯೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>