ಕನ್ನಡದ ಅಸ್ಮಿತೆಯ ಹೋರಾಟ ಗೋಕಾಕ್ ಚಳವಳಿಯಲ್ಲಿ ಅಪ್ಪ ಸಕ್ರಿಯವಾಗಿದ್ದಾಗ ಅವರೊಂದಿಗೆ ಇಡೀ ರಾಜ್ಯ ಸುತ್ತಿದ್ದ ಪುನೀತ್, ಇಳಕಲ್ನಲ್ಲೂ ಇಡೀ ದಿನ ಅಪ್ಪನೊಂದಿಗೆ ಇದ್ದರು. ನಟರಾದ ಅಶೋಕ್, ಲೋಕೇಶ್ ಅವರೊಂದಿಗೆ ಡಾ.ರಾಜಕುಮಾರ್ ವೇದಿಕೆ ಹಂಚಿಕೊಂಡಿದ್ದರೆ, ಸ್ಥಳೀಯರಾದ ಬಸವರಾಜ ಸಪ್ಪರದ, ಸಿ.ಸಿ.ಚಂದ್ರಾಪಟ್ಟಣ, ಎಲ್.ಜಿ.ಕುಟಂನಗೌಡ ನಟರೊಂದಿಗೆ ಇದ್ದರು. ಈ ವೇಳೆ ಅಪ್ಪನ ತೊಡೆಯ ಮೇಲೆ ಕುಳಿತು ಪುನೀತ್ ಭಾಷಣ ಆಲಿಸಿದ್ದರು ಎಂದು ಇಳಕಲ್ನ ಹಿರಿಯರುನೆನಪಿಸಿಕೊಳ್ಳುತ್ತಾರೆ.