<p><strong>ಬಾಗಲಕೋಟೆ</strong>: ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿಯಲ್ಲಿ ಸಂಶೋಧನೆಗಳು ಮುಖ್ಯವಾಗಿದ್ದು, ಸಮಾಜದ ಏಳಿಗೆಗೆ ಅಧ್ಯಯನವೇ ಮುನ್ನುಡಿಯಾಗಿದೆ ಎಂದು ಬೆಂಗಳೂರಿನ ಲಿವನ್ ಬಯೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಎನ್.ಜಿ ಹೇಳಿದರು.</p>.<p>ಬಿವಿವಿ ಸಂಘದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಬಯೋಇನ್ನೋವೇಷನ್ ಸೆಂಟರ್, ಲೈವಾನ್ ಬಯೋಲ್ಯಾಬ್ಸ್ ಹಾಗೂ ಬಿವಿಜಿ ಲೈಫ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ ‘ದಿ ಆರ್ಕಿಟೆಕ್ಚರ್ ಆಫ್ ರಿಸರ್ಚ್ ಲೈಫ್ಸೈಕಲ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಭವಿಷ್ಯದ ಸಂಶೋಧನಾ ಚಟುವಟಿಕೆಗೆ ಇದು ಒಂದು ವೇದಿಕೆ ಆಗಲಿ. ಸಂಶೊಧನೆಗೆ ಪರಿಶೋಧನೆ, ವಿಶ್ಲೇಷಣೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ಅನುಷ್ಠಾನ ಮತ್ತು ನಿರ್ವಹಣೆ ಮುಖ್ಯವಾಗಿವೆ, ಸಂಶೋಧನಾ ಪ್ರಬಂಧಗಳು ಸಮಾಜಕ್ಕೆ ಮತ್ತು ಸಮಾಜದ ಸುಧಾರಣೆಗೆ ಅವಶ್ಯಕವಾಗಿದೆ. ಸಂಶೋಧನೆಯು ಅತ್ಯುನ್ನತ ಮೌಲ್ಯ ಹೊಂದಿದೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಪ್ರಬಂಧ ಹೇಗೆ ಪ್ರಸ್ತುತ ಪಡಿಸುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಪ್ರಬಂಧವು ಮೌಲ್ಯ ಒಳಗೊಂಡಿರಲಿ ಎಂದು ಹೇಳಿದರು.</p>.<p>ಡಾ.ವಿ.ಎಂ. ಚಂದ್ರಶೇಖರ ಮಾತನಾಡಿ, ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿ ಮತ್ತು ಸಂಶೋಧನೆಗೆ ಹೊಸ ದೃಷ್ಟಿಕೋನ ಒದಗಿಸುವಲ್ಲಿ ಕಾರ್ಯಾಗಾರ ಪ್ರಮುಖವಾಗಿದೆ ಎಂದರು.</p>.<p>ಡಾ.ಜಿ. ಜಗದೀಶ, ಡಾ.ಬಾಲಾಕುಮಾರ ಪಿಚೈ, ಡಾ.ಶುಭದಾ ನಗರಕರ, ಡಾ.ರಾಜರಾಜಶೇಖರನ್, ಡಾ.ಮನೀಶ್ ಬರವಾಲಿಯಾ ವಿಶೇಷ ಉಪನ್ಯಾಸ ನೀಡಿದರು.</p>.<p>ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ವೈ. ಶ್ರೀನಿವಾಸ ಉಪಸ್ಥರಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿಯಲ್ಲಿ ಸಂಶೋಧನೆಗಳು ಮುಖ್ಯವಾಗಿದ್ದು, ಸಮಾಜದ ಏಳಿಗೆಗೆ ಅಧ್ಯಯನವೇ ಮುನ್ನುಡಿಯಾಗಿದೆ ಎಂದು ಬೆಂಗಳೂರಿನ ಲಿವನ್ ಬಯೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಎನ್.ಜಿ ಹೇಳಿದರು.</p>.<p>ಬಿವಿವಿ ಸಂಘದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಬಯೋಇನ್ನೋವೇಷನ್ ಸೆಂಟರ್, ಲೈವಾನ್ ಬಯೋಲ್ಯಾಬ್ಸ್ ಹಾಗೂ ಬಿವಿಜಿ ಲೈಫ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ ‘ದಿ ಆರ್ಕಿಟೆಕ್ಚರ್ ಆಫ್ ರಿಸರ್ಚ್ ಲೈಫ್ಸೈಕಲ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಭವಿಷ್ಯದ ಸಂಶೋಧನಾ ಚಟುವಟಿಕೆಗೆ ಇದು ಒಂದು ವೇದಿಕೆ ಆಗಲಿ. ಸಂಶೊಧನೆಗೆ ಪರಿಶೋಧನೆ, ವಿಶ್ಲೇಷಣೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ಅನುಷ್ಠಾನ ಮತ್ತು ನಿರ್ವಹಣೆ ಮುಖ್ಯವಾಗಿವೆ, ಸಂಶೋಧನಾ ಪ್ರಬಂಧಗಳು ಸಮಾಜಕ್ಕೆ ಮತ್ತು ಸಮಾಜದ ಸುಧಾರಣೆಗೆ ಅವಶ್ಯಕವಾಗಿದೆ. ಸಂಶೋಧನೆಯು ಅತ್ಯುನ್ನತ ಮೌಲ್ಯ ಹೊಂದಿದೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಪ್ರಬಂಧ ಹೇಗೆ ಪ್ರಸ್ತುತ ಪಡಿಸುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಪ್ರಬಂಧವು ಮೌಲ್ಯ ಒಳಗೊಂಡಿರಲಿ ಎಂದು ಹೇಳಿದರು.</p>.<p>ಡಾ.ವಿ.ಎಂ. ಚಂದ್ರಶೇಖರ ಮಾತನಾಡಿ, ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿ ಮತ್ತು ಸಂಶೋಧನೆಗೆ ಹೊಸ ದೃಷ್ಟಿಕೋನ ಒದಗಿಸುವಲ್ಲಿ ಕಾರ್ಯಾಗಾರ ಪ್ರಮುಖವಾಗಿದೆ ಎಂದರು.</p>.<p>ಡಾ.ಜಿ. ಜಗದೀಶ, ಡಾ.ಬಾಲಾಕುಮಾರ ಪಿಚೈ, ಡಾ.ಶುಭದಾ ನಗರಕರ, ಡಾ.ರಾಜರಾಜಶೇಖರನ್, ಡಾ.ಮನೀಶ್ ಬರವಾಲಿಯಾ ವಿಶೇಷ ಉಪನ್ಯಾಸ ನೀಡಿದರು.</p>.<p>ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ವೈ. ಶ್ರೀನಿವಾಸ ಉಪಸ್ಥರಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>